Asianet Suvarna News Asianet Suvarna News

ಕರುನಾಡ ನೆರೆ ಸಂತ್ರಸ್ತರ ನೋಡಿ ಮಿಡಿದ ಅಣ್ಣಾಮಲೈ

ತಮ್ಮ ಮಾನವೀಯ ಕೆಲಸಗಳಿಂದಲೇ ಮನೆಮಾತಾಗಿದ್ದ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸಿರುವ ಜನರ ಸುರಕ್ಷೆಗಾಗಿ ಎಲ್ಲರೂ ಕೈ ಜೋಡಿಸುವಂತೆ ಕೋರಿ ಟ್ವೀಟ್ ಮಾಡಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಪ್ರವಾಹದಿಂದ ಜನರು ಸಂತ್ರಸ್ತರಾಗಿದ್ದು, ಅವರ ಸರಕ್ಷತೆಗೆ ಪ್ರಾರ್ಥಿಸಿದ್ದಾರೆ.

Former IPs K Annamalai urges people to help North Karnataka flood hit victims
Author
Bangalore, First Published Aug 10, 2019, 12:08 PM IST

ತಮ್ಮ ಮಾನವೀಯ ಕೆಲಸಗಳಿಂದಲೇ ಮನೆಮಾತಾಗಿರುವ  ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸಿರುವ ಜನರ ಸುರಕ್ಷೆಗಾಗಿ ಎಲ್ಲರೂ ಕೈ ಜೋಡಿಸುವಂತೆ ಕೋರಿ ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಪ್ರವಾಹದಿಂದ ಜನರು ಸಂತ್ರಸ್ತರಾಗಿದ್ದು, ಅವರ ಸರಕ್ಷತೆಗೆ ಪ್ರಾರ್ಥಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

'ಕರ್ನಾಟಕ ರಾಜ್ಯಾದ್ಯಂತ ನೆರೆಯಿಂದಾಗಿ ಜನರು ತತ್ತರಿಸಿದ್ದಾರೆ. ಉತ್ತರ ಕರ್ನಾಟದಲ್ಲಿ ನೆರೆ ಕೆಟ್ಟದಾಗಿ ಪರಿಣಾಮ ಬೀರಿದೆ. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ಜನರೂ, ತಮ್ಮ ಬದುಕು ಮೊದಲಿನಂತಾಗುತ್ತದೆ ಎಂಬ ಆಶಾ ಭಾವನೆಯಲ್ಲಿರುವ ಜನರೊಂದಿಗೆ ನನ್ನ ಪ್ರಾಮಣಿಕ ಪ್ರಾರ್ಥನೆ ಇದೆ. ನಮ್ಮ ಅಗತ್ಯವಿರುವ ಜನರಿಗಾಗಿ ನಾವೆಲ್ಲರೂ ಕೈ ಜೋಡಿಸಬೇಕಾದ ಸಮಯ ಬಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೆಲ್ಕೊ ಸೋಲಾರ್‌ ಲೈಟ್‌ ಸೌಲಭ್ಯ

Follow Us:
Download App:
  • android
  • ios