ಚೆನ್ನೈ(ಅ.01): ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ ಬಗ್ಗೆ ಉಹಾಪೋಹ ಹರಿದಾಡುತ್ತಿದೆ.

ಇನ್ನು ಜಯಲಲಿತಾಗೆ ಹೆಚ್ಚಿನ ಚಿಕಿತ್ಸೆ ನೀಡಲು ಲಂಡನ್​ನಿಂದ ವೈದ್ಯರ ತಂಡ ಚೆನ್ನೈಗೆ ಆಗಮಿಸಿದೆ. ಈ ಮಧ್ಯೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್​ ಇಂದು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಲಿದ್ದು ಜಯಾ ಆರೋಗ್ಯ ಸ್ಥಿತಿ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.