ಪೀಲಿಭೀತ್‌ನಲ್ಲಿ ಹುಲಿ ಅಭಯಾರಣ್ಯ ಇದೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವರು ಸಾವನ್ನಪ್ಪಿದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅರಣ್ಯಕ್ಕೆ ವೃದ್ಧರನ್ನು ಯಾವುದೋ ಕಾರಣ ಹೇಳಿ ಕಳಿಸಲಾಗುತ್ತದೆ. ಅಲ್ಲಿ ಅವರು ಹುಲಿ ದಾಳಿಗೆ ಬಲಿಯಾದಾಗ ಅವರ ಶವವನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿರುವ ಕೃಷಿ ಜಮೀನಿನಲ್ಲಿ ತಂದು ಹಾಕಲಾಗುತ್ತದೆ. ಆಗ ನಾಗರಿಕ ಪ್ರದೇಶಕ್ಕೆ ನುಗ್ಗಿ ಹುಲಿ ದಾಳಿ ನಡೆಸಿದೆ ಎಂದು ಸುಳ್ಳು ಹೇಳಿ ಸರ್ಕಾರದಿಂದ ಪರಿಹಾರ ಪಡೆಯಲಾಗುತ್ತಿದೆ.

ಪೀಲಿಭೀತ್(ಜು.06): ಸರ್ಕಾರದಿಂದ ಬರುವ ಪರಿಹಾರದ ಆಸೆಗಾಗಿ ತಮ್ಮ ಕುಟುಂಬದ ವೃದ್ಧರನ್ನು ಅರಣ್ಯಕ್ಕೆ ಕಳಿಸಿ ಹುಲಿಗೆ ಆಹಾರ ನೀಡುವ ಹೇಯ ಘಟನೆಗಳು ಉತ್ತರಪ್ರದೇಶದ ಪೀಲಿಭೀತ್‌ನಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳಲ್ಲಿ ಇಂಥ ಹಲವಾರ ಅತ್ಯಂತ ಹೇಯ ಘಟನಾವಳಿಗಳು ನಡೆದಿವೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಪೀಲಿಭೀತ್‌ನಲ್ಲಿ ಹುಲಿ ಅಭಯಾರಣ್ಯ ಇದೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವರು ಸಾವನ್ನಪ್ಪಿದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅರಣ್ಯಕ್ಕೆ ವೃದ್ಧರನ್ನು ಯಾವುದೋ ಕಾರಣ ಹೇಳಿ ಕಳಿಸಲಾಗುತ್ತದೆ. ಅಲ್ಲಿ ಅವರು ಹುಲಿ ದಾಳಿಗೆ ಬಲಿಯಾದಾಗ ಅವರ ಶವವನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿರುವ ಕೃಷಿ ಜಮೀನಿನಲ್ಲಿ ತಂದು ಹಾಕಲಾಗುತ್ತದೆ. ಆಗ ನಾಗರಿಕ ಪ್ರದೇಶಕ್ಕೆ ನುಗ್ಗಿ ಹುಲಿ ದಾಳಿ ನಡೆಸಿದೆ ಎಂದು ಸುಳ್ಳು ಹೇಳಿ ಸರ್ಕಾರದಿಂದ ಪರಿಹಾರ ಪಡೆಯಲಾಗುತ್ತಿದೆ.

ಫೆಬ್ರವರಿ 16ರಿಂದ ಈಚೆಗೆ ಇಂತಹ 7 ಘಟನೆಗಳು ಸಂಭವಿಸಿದ್ದು, ಮೃತರಲ್ಲಿ ವಯಸ್ಸಾದವರೇ ಹೆಚ್ಚಿದ್ದಾರೆ. ಹೀಗಾಗಿ ಈ ಬಗ್ಗೆ ಸಂದೇಹಗೊಂಡು ರಾಷ್ಟ್ರೀಯ ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ ತನಿಖೆ ನಡೆಸಿದಾಗ, ಸಾವುಗಳೆಲ್ಲ ಶಂಕಾಸ್ಪದ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಕಾರಕ್ಕೆ ಅದು ಶಿಫಾರಸು ಮಾಡಿದೆ.

ಆದರೆ ಕುಟುಂಬಗಳು ಹೇಳೋದೇ ಬೇರೆ. ‘ಹಿರಿಯರು ತಾವಾಗೇ ಈ ಕೆಲಸಕ್ಕೆ ಮುಂದಾಗಿದ್ದಾರೆ. ಅರಣ್ಯದಿಂದ ನಮಗೆ ಯಾವುದೇ ಸಂಪನ್ಮೂಲ ಪಡೆಯುವುದರಿಂದ ನಿರ್ಬಂಧ ವಿಸಲಾಗಿದೆ. ಹೀಗಾಗಿ ಬಡತನದಿಂದ ಹೊರಬರಲು ಈ ಕೆಲಸ ಅನಿವಾರ್ಯ’ ಎಂದಿದ್ದಾರೆ.