ಹೈದ್ರಾಬಾದ್'ನಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಸವಾರ
ಹೈದ್ರಾಬಾದ್(ಸೆ.28): ಹೈದ್ರಾಬಾದ್ನ ಮೆಡಿಚಲ್ ಗ್ರಾಮದ ಬಳಿ ಬೈಕ್ ಸವಾರನೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.. ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ಮುಳುಗಿ ಹೋಗಿವೆ.
ಮೆಡಿಚಲ್ ಗ್ರಾಮದ ಬಳಿ ಬೈಕ್ಸವಾರ ನೆರೆ ನೀರಿನಲ್ಲೇ ರಸ್ತೆ ದಾಟಲು ಭಂಡ ಧೈರ್ಯ ತೋರಿದ್ದಾನೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ಸ್ಥಳೀಯರು ಕೂಡ ರಸ್ತೆ ದಾಟದಂತೆ ಬೈಕ್ ಸವಾರನಿಗೆ ಸೂಚಿಸಿದ್ದಾರೆ.
ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಬೈಕ್ ಸವಾರ ಭಂಡ ಧೈರ್ಯದಿಂದ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ನೀರಿನ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿದೆ. ಕೂಡಲೇ ಸವಾರ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ಸ್ಥಳೀಯರು ಅವನನ್ನು ರಕ್ಷಿಸಿಲು ಮುಂದಾದರು. ಆದರೆ ನೀರಿನ ರಭಸ ಹೆಚ್ಚಿದ್ದರಿಂದ ಸಾಧ್ಯವಾಗಿಲ್ಲ.