ಕೆಪಿಎಸ್ಸಿ ಪರೀಕ್ಷೆಯಲ್ಲಿ ಮೆರಿಟ್ ಇದ್ದವರಿಗೆ ಆದ್ಯತೆ ನೀಡಬೇಕೆಂದು ಶೆಟ್ಟರ್ ಆಗ್ರಹ
ಶ್ಯಾಂ ಭಟ್ ಕೆಪಿಎಸ್ಸಿ ಅಧ್ಯಕ್ಷರಾಗಿದ್ದೇ ಕೆಪಿಎಸ್ಸಿ ಮುಚ್ಚುವುದಕ್ಕೆ. ಇದುವರೆಗೂ ಒಂದೇ ಒಂದು ನೋಟಿಫಿಕೇಶನ್ ಹೊರಡಿಸಿಲ್ಲ.ಕೆಪಿಎಸ್ಸಿಯಲ್ಲಿ ಪಾರರ್ದಶಕತೆ ಇಲ್ಲವೆಂದು ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರು (ಡಿ. 21): ಶ್ಯಾಂ ಭಟ್ ಕೆಪಿಎಸ್ಸಿ ಅಧ್ಯಕ್ಷರಾಗಿದ್ದೇ ಕೆಪಿಎಸ್ಸಿ ಮುಚ್ಚುವುದಕ್ಕೆ. ಇದುವರೆಗೂ ಒಂದೇ ಒಂದು ನೋಟಿಫಿಕೇಶನ್ ಹೊರಡಿಸಿಲ್ಲ.ಕೆಪಿಎಸ್ಸಿಯಲ್ಲಿ ಪಾರರ್ದಶಕತೆ ಇಲ್ಲವೆಂದು ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೆಪಿಎಸ್ಸಿ ಯಲ್ಲಿ ಸಂದರ್ಶನ ತೆಗದುಹಾಕಿ,ಲಿಖಿತ ಪರೀಕ್ಷೆ ನೀಡಬೇಕು. ಮೆರಿಟ್ ನಲ್ಲಿ ಪಾಸ್ ಆದವರಿಗೆ ಆದ್ಯತೆ ನೀಡಬೇಕು. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದಾಗ 2000 ಗ್ರಾಮೀಣಾಭಿವೃದ್ಧಿ ಇಲಾಖೆಯ ಪಿಡಿಓ ಗಳನ್ನ ನೇಮಕ ಮಾಡಿದ್ದೆ. ಅದೇ ರೀತಿ ಈ ಸರ್ಕಾರ ವೈವಾ ರದ್ದು ಮಾಡಬೇಕು. ಲಿಖಿತ ಪರೀಕ್ಷೆಯಲ್ಲಿ ಮೆರಿಟ್ ನಲ್ಲಿ ಪಾಸ್ ಆದವರಿಗೆ ಆದ್ಯತೆ ನೀಡಬೇಕು ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.