Asianet Suvarna News Asianet Suvarna News

ಲಸಿಕೆ ಘಟಕದಲ್ಲಿ ಅಗ್ನಿ ಅವಘಡ, ಕೊನೆಗೂ ರಾಗಿಣಿಗೆ ಬಿಡುಗಡೆ; ಜ.21ರ ಟಾಪ್ 10 ಸುದ್ದಿ!

ಪುಣೆ ಸೀರಂ ಲಸಿಕೆ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಪ್ತ ದೇಶಗಳಿಗೆ ಭಾರತ ಕೊರೋನಾ ಲಸಿಕೆ ವಿತರಣೆ ಮಾಡಿದೆ. ನಟಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಬಿರುಕು ಮೂಡಿದೆ. ಆರ್‌ಸಿಬಿ ಕಾಲೆಳೆದ ಪಾರ್ಥೀವ್ ಪಟೇಲ್, ಊಟದ ಸ್ಪರ್ಧೆಯಲ್ಲಿ ಗೆದ್ದವರಿಗೆ ರಾಯಲ್ ಎನ್‌ಫೀಲ್ಡ್ ಬಹುಮಾನ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
 

Fire at serum institute to Ragini Dwivedi top 10 news o January 21 ckm
Author
Bengaluru, First Published Jan 21, 2021, 5:00 PM IST

ಸೀರಂ ಸಂಸ್ಥೆಯಲ್ಲಿ ಅಗ್ನಿ ಅವಘಡ, ಕೊರೋನಾ ಲಸಿಕೆಗಳಿದ್ದ ಘಟಕ ಸೇಫ್!...

Fire at serum institute to Ragini Dwivedi top 10 news o January 21 ckm

ದೇಶಾದ್ಯಂತ ಸದ್ಯ ನಿಡಲಾಗುತ್ತಿರುವ ಕೋವಿಶೀಲ್ಡ್, ಮೇಡ್‌ ಇನ್ ಇಂಡಿಯಾ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಪುಣೆಯ ಸೀರಂ ಸಂಸ್ಥೆಯ ಒಂದನೇ ಗೇಟ್‌ ಬಳಿ ಭಾರೀ ಅಗ್ನ ಅವಘಡ ಸಂಭವಿಸಿದೆ. ಈ ಅಗ್ನಿ ಅನಾಹುತಕ್ಕೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

ನಟಿ ರಾಗಿಣಿಗೆ ಬಿಗ್ ರಿಲೀಫ್, ಜಾಮೀನು ನೀಡಿದ ಸುಪ್ರೀಂ ಕೋರ್ಟ್!...

Fire at serum institute to Ragini Dwivedi top 10 news o January 21 ckm

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಕೊನೆಗೂ ರಿಲೀಫ್ ಸಿಕ್ಕಿದೆ. 140 ದಿನಗಳಿಂದ ಜೈಲ್ಲಿನಲ್ಲಿದ್ದ ತುಪ್ಪದ ಹುಡುಗಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 

ಭೂತಾನ್‌, ಮಾಲ್ಡೀವ್ಸ್‌ಗೆ ಭಾರತದಿಂದ ಮೊದಲ ಕೊರೋನಾ ಲಸಿಕೆ ಪೂರೈಕೆ!...

Fire at serum institute to Ragini Dwivedi top 10 news o January 21 ckm

ನೆರೆಹೊರೆ ಮೊದಲು ಎಂಬ ನೀತಿಯನ್ನು ಕೊರೋನಾ ಲಸಿಕೆ ವಿತರಣೆಗೂ ವಿಸ್ತರಿಸಿರುವ ಭಾರತ ಸರ್ಕಾರ, ಈ ಯೋಜನೆಯಡಿ ಬುಧವಾರ ತನ್ನ ಅತ್ಯಾಪ್ತ ದೇಶಗಳಾದ ಭೂತಾನ್‌ ಮತ್ತು ಮಾಲ್ಡೀವ್‌್ಸಗೆ ಲಸಿಕೆ ರವಾನಿಸಿದೆ. ಮೊದಲ ಹಂತದಲ್ಲಿ ಭೂತಾನ್‌ಗೆ 1.50 ಲಕ್ಷ ಹಾಗೂ ಮಾಲ್ಡೀವ್‌್ಸಗೆ 1 ಲಕ್ಷ ಕೋವಿಶೀಲ್ಡ್‌ ಲಸಿಕೆಗಳು ತಲುಪಿವೆ.

ನನ್ನನ್ನು ಕೈಬಿಟ್ಟಿದ್ದಕ್ಕೆ ಥ್ಯಾಂಕ್ಯೂ: ಆರ್‌ಸಿಬಿ ಕಾಲೆಳೆದ ಪಾರ್ಥಿವ್ ಪಟೇಲ್‌..!...

Fire at serum institute to Ragini Dwivedi top 10 news o January 21 ckm

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾರ್ಥಿವ್ ಪಟೇಲ್‌ ಅವರನ್ನು ರಿಲೀಸ್‌ ಮಾಡಿದ ಬೆನ್ನಲ್ಲೇ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆರ್‌ಸಿಬಿ ತಂಡದ ಕಾಲೆಳೆದಿದ್ದಾರೆ. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರಾ ಅನುಷ್ಕಾ..? ಪುಟ್ಟ ಕಂದಮ್ಮನೆಲ್ಲಿ..?...

Fire at serum institute to Ragini Dwivedi top 10 news o January 21 ckm

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಹೊರಗೆ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಪುಟ್ಟ ಮಗಳೆಲ್ಲಿದ್ದಾಳೆ..?

ಜನರ ಜೇಬಿಗೆ ಹೆಚ್ಚಿನ ಹಣ, ತೆರಿಗೆ ಕಡಿತ; ಕೇಂದ್ರ ಬಜೆಟ್ 2021 ಕುರಿತು ತಜ್ಞರು ಹೇಳುವುದೇನು?...

Fire at serum institute to Ragini Dwivedi top 10 news o January 21 ckm

 ಕೊರೋನಾ ವಕ್ಕರಿಸಿದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.   ಉತ್ಪಾದನೆ, ಬೇಡಿಕೆಯಲ್ಲಾದ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದೀಗ ಕೇಂದ್ರದ ಬಜೆಟ್ ಕೊರೋನಾದಿಂದ ತುಂಡಾಗಿದ್ದ ಜೀವನ ಚಕ್ರಕ್ಕೆ ಹೊಸ ಚೈತನ್ಯ ನೀಡಲಿದೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ತಜ್ಞರು ಭವಿಷ್ಯ ನುಡಿದಿದ್ದಾರೆ.

1 ಪ್ಲೇಟ್ ಊಟ, 1 ಗಂಟೆ ಸಮಯ; ಗೆದ್ದವರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನ!...

Fire at serum institute to Ragini Dwivedi top 10 news o January 21 ckm

ಸ್ಪರ್ಧೆಗಳು ಅದಕ್ಕೆ ಬಹುಮಾನ ಸಾಮಾನ್ಯ. ಆದರೆ ಕೆಲವೊಂದು ಸ್ಪರ್ಧೆ ಹಾಗೂ ಬಹುಮಾನ ಭಾರಿ ಸದ್ದು ಮಾಡುತ್ತದೆ. ಇದೀಗ ರೆಸ್ಟೋರೆಂಟ್‌ ಒಂದು ಭರ್ಜರಿ ಊಟದ ಸ್ಪರ್ಧೆ ಆಯೋಜಿಸಿದೆ. ಇಲ್ಲಿ ಗೆದ್ದರೆ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನವಾಗಿ ನೀಡಲಾಗುತ್ತಿದೆ. ನೀವು ಒಂದು ಸಲ ಟ್ರೈ ಮಾಡಬಹುದು.

ಮಂಗಳಸೂತ್ರ ಧರಿಸಿದ ರೇಖಾ: ಡಿನ್ನರ್‌ಗೆ ಕರೆದ ಜಯಾ ಬಚ್ಚನ್ ಹೀಗನ್ನಬಾರದಿತ್ತು...

Fire at serum institute to Ragini Dwivedi top 10 news o January 21 ckm

ಬಾಲಿವುಡ್‌ನ ಅತ್ಯಂತ ಕಂಟ್ರವರ್ಶಿಯಲ್‌ ಲವ್‌ಸ್ಟೋರಿ ಅಂದರೆ ನಟಿ ರೇಖಾ ಹಾಗೂ ಅಮಿತಾಬ್‌ ಬಚ್ಚನ್‌ರದು. ಹಲವು ದಶಕಗಳ ನಂತರವೂ ಈ ವಿಷಯ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಆ ದಿನಗಳಲ್ಲಿ ಅಮಿತಾಭ್ ಮತ್ತು ರೇಖಾ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್‌ ಸದ್ದು ಮಾಡಿತು. ಅವರ ಮ್ಯಾರೀಡ್‌ ಲುಕ್‌ ನೋಡಿ ರೇಖಾರನ್ನು ಡಿನ್ನರ್‌ಗೆ ಆಹ್ವಾನಿಸಿ ಜಯಬಚ್ಚನ್‌ ಏನು ಹೇಳಿದ್ದರು ಗೊತ್ತಾ?

ಮಂಗಳೂರಿನ ಬಸ್ಸಲ್ಲಿ ಎಲ್ಲರೆದುರೇ ಯುವತಿ ಜೊತೆ ಕಾಮುಕನ ಅಸಭ್ಯ ನಡೆ...

Fire at serum institute to Ragini Dwivedi top 10 news o January 21 ckm

ಬಸ್ಸಿನಲ್ಲಿ ಎಲ್ಲರೆದುರೇ ಕಾಮುಕನೋರ್ವ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈತನ ಕೃತ್ಯ ವೈರಲ್ ಆಗಿದೆ. 

ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ತಿವಿದ ಸಚಿವ: ಯಡಿಯೂರಪ್ಪ ಸಂಪುಟದಲ್ಲಿ ಬಿರುಕು...

Fire at serum institute to Ragini Dwivedi top 10 news o January 21 ckm

ಇದ್ದದ್ದನ್ನ ಕಸಿದುಕೊಂಡು, ಬದಲಿ ಖಾತೆ ಕೊಟ್ಟಿದ್ದಕ್ಕೆ ಕೆಲ ಸಚಿವರುಗಳು ಅಸಮಾಧಾನಗೊಂಡಿದ್ದಾರೆ. ಇನ್ನು ಇದಕ್ಕೆ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದು, ಖಾತೆ ಕ್ಯಾತೆ ತೆಗೆದವರಿಗೆ ತಿವಿದಿದ್ದಾರೆ.

Follow Us:
Download App:
  • android
  • ios