(ಸುಳ್ ಸುದ್ದಿ) ಅಧಿಕಾರ ಹಿಡಿಯಲು ಪಗಡೆ ಆಟಕ್ಕೆ ಎಚ್ ಡಿಕೆ ಆಹ್ವಾನಿಸಿದ ಬಿಎಸ್ ವೈ ?
ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ.
ಬೆಂಗಳೂರು : ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ. ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪ ಪಗಡೆ ಆಟಕ್ಕೆ ಆಹ್ವಾನಿಸಿದ್ದಾರೆ.
ಒಂದು ವೇಳೆ ಈ ಆಟದಲ್ಲಿ ಏನಾದರೂ ಕುಮಾರಸ್ವಾಮಿ ಸೋತರೆ ಕೂಡಲೆ ಅಧಿಕಾರವನ್ನು ಹಸ್ತಾಂತರಿಸಿ, 5 ವರ್ಷ ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಅದೇ ರೀತಿ ಯಡಿಯೂರಪ್ಪ ಸೋತರೆ 5 ವರ್ಷ ವಿಪಕ್ಷ ಸ್ಥಾನದಲ್ಲೇ ಬಿಜೆಪಿ ಇರಲಿದೆ. ಸರ್ಕಾರ ರಚಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ.
ಹೀಗಾಗಿ ವಿಧಾನಸೌಧದ ಮೊಗಸಾಲೆಯಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮಧ್ಯೆ ಪಗಡೆ ಆಟ ನಿಗದಿಯಾಗಿದೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.