Asianet Suvarna News Asianet Suvarna News

(ಸುಳ್ ಸುದ್ದಿ) ಅಧಿಕಾರ ಹಿಡಿಯಲು ಪಗಡೆ ಆಟಕ್ಕೆ ಎಚ್ ಡಿಕೆ ಆಹ್ವಾನಿಸಿದ ಬಿಎಸ್ ವೈ ?

ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ.

Faking News BSY Invites HD Kumaraswamy To Form Govt
Author
Bengaluru, First Published Sep 21, 2018, 4:06 PM IST

 
ಬೆಂಗಳೂರು : ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳ ಸಮರ ಅಂತಿಮ ಹಂತ ತಲುಪಿದೆ. ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪ ಪಗಡೆ ಆಟಕ್ಕೆ ಆಹ್ವಾನಿಸಿದ್ದಾರೆ. 

ಒಂದು ವೇಳೆ ಈ ಆಟದಲ್ಲಿ ಏನಾದರೂ ಕುಮಾರಸ್ವಾಮಿ ಸೋತರೆ ಕೂಡಲೆ ಅಧಿಕಾರವನ್ನು ಹಸ್ತಾಂತರಿಸಿ, 5 ವರ್ಷ ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಅದೇ ರೀತಿ ಯಡಿಯೂರಪ್ಪ ಸೋತರೆ 5 ವರ್ಷ ವಿಪಕ್ಷ ಸ್ಥಾನದಲ್ಲೇ ಬಿಜೆಪಿ ಇರಲಿದೆ. ಸರ್ಕಾರ ರಚಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. 

ಹೀಗಾಗಿ ವಿಧಾನಸೌಧದ ಮೊಗಸಾಲೆಯಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮಧ್ಯೆ ಪಗಡೆ ಆಟ ನಿಗದಿಯಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios