ಸದ್ಯ ಮತ್ತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಚರ್ಚೆಗಳು ಗರಿಗೆದರಿವೆ. ಆಪರೇಷನ್ ಕಮಲ ರೆಕ್ಕೆ ಪುಕ್ಕ ಪಡೆದುಕೊಂಡಿದೆ. ಪಕ್ಷಗಳಿಂದ ವಿವಿಧ ಶಾಸಕರಿಗೆ ಆಮಿಷಗಳ ಬಗ್ಗೆಯೂ ಕೂಡ ಸಾಕಷ್ಟು ವರದಿಯಾಗುತ್ತಿದೆ.

ಬೆಂಗಳೂರು : ಆಪರೇಷನ್‌ ಕಮಲದ ಮೂಲಕ ಬಿಜೆಪಿಯು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ, ಪಕ್ಷಕ್ಕೆ ಬರುವ ಪ್ರತಿ ಶಾಸಕರಿಗೆ 25 ಕೋಟಿ ರು. ಹಣ, ಚುನಾವಣಾ ಖರ್ಚು ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

Add Asianetnews Kannada as a Preferred SourcegooglePreferred

ಆದರೆ, ತಮಗೆ ಕೇವಲ 25 ಕೋಟಿ ನೀಡಲಾಗುತ್ತಿದೆ ಎಂಬ ಸುದ್ದಿ ಪ್ರಕಟವಾಗುತ್ತಿರುವುದಕ್ಕೆ ಕೆಲ ಶಾಸಕರು ಬೇಸರ ಮಾಡಿಕೊಂಡಿದ್ದಾರೆ. 

ನಮ್ಮ ಬೆಲೆ ಕೇವಲ 25 ಕೋಟಿಯೇ? ಕೊಡುವುದು ಎಷ್ಟಾದರೂ ಕೊಡಲಿ, ಆದರೆ ಕನಿಷ್ಠ ಪಕ್ಷ ಮಾಧ್ಯಮದಲ್ಲಾದರೂ 50 ಅಥವಾ 75 ಕೋಟಿ ಎಂದು ಸುದ್ದಿ ಪ್ರಕಟವಾಗುವಂತೆ ಮಾಡಲಿ ಎಂದು ಶಾಸಕರು ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.