Asianet Suvarna News Asianet Suvarna News

ವಿಷದ ಹಾವಿನಿಂದ ಮಾಲೀಕನನ್ನು ರಕ್ಷಿಸಿ ಜೀವ ಬಿಟ್ಟ ಶ್ವಾನ

ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಎಂದರೆ ಅದು ನಾಯಿ. ಇಂತಹ ನಾಯಿಯ ಮನಕಲುಕುವ ಘಟನೆಯೊಂದು ಇದೀಗ ಸುದ್ದಿಯಾಗುತ್ತಿದೆ. ಏನದು..?

Dog Dies Of Snakebite While Saving His Owner From Snake
Author
Bengaluru, First Published Apr 29, 2019, 1:32 PM IST

ತಂಜಾವೂರು : ನಾಯಿ ನಿಯತ್ತಿಗಿಂತ ಮಿಗಿಲಾಗಿರುವುದು ಯಾವುದು ಇಲ್ಲ. ಮನುಷ್ಯನೊಂದಿಗೆ ಸದಾ ಸ್ನೇಹ, ನಿಯತ್ತಿನೊಂದಿಗೆ ಬದುಕುವ ಜೀವಿ ಇದು. 

ಅದೇ ರೀತಿ ತಮಿಳುನಾಡಿನಲ್ಲಿ ನಾಯಿ ನಿಯತ್ತಿಗೆ ಸಾಕ್ಷಿಯಾದ ಮನಕಲುಕುವ ಘಟನೆಯೊಂದು ನಡೆದಿದೆ. ನಾಯಿ ಹಾವಿನೊಂದಿಗೆ ಹೋರಾಡಿ ತನ್ನ ಮಾಲಿಕನ ಜೀವ ಕಾಪಾಡಿದೆ ಹಾವು ಕಡಿದಿದ್ದು, ಈ ವೇಳೆ ಹಾವಿನಿಂದ ತನ್ನ ಮಾಲೀಕರನ್ನು ಕಾಪಾಡಿದೆ. 

ತಮಿಳುನಾಡಿನ ವೆಂಗರಾಯನ ಕುಡಿಕಾಡು ಪ್ರದೇಶದ ರೈತ 50 ವರ್ಷದ ನಟರಾಜು ಬೆಳ್ಳಂಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗರ ಹಾವೊಂದು ಸ್ಥಳದಲ್ಲಿತ್ತು.  ಹಾವು  ಹೆಡೆ ಬಿಚ್ಚಿ ನಟರಾಜನ್ ಗೆ ಕಚ್ಚಲು ಯತ್ನಿಸಿದೆ. ಈ ವೇಳೆ ತಕ್ಷಣ ನಾಯಿ ಅಡ್ಡ ಬಂದು ಬೊಗಳಲಾರಂಭಿಸಿದೆ.   

ಈ ವೇಳೆ ನಟರಾಜನ್ ಹಿಂದೆ ಸರಿದಿದ್ದು, ನಾಯಿಗೆ ಕಾವು ಕಚ್ಚಿದ್ದು, ಮಾಲೀಕನ ಕಾಪಾಡಿ ತನ್ನ ಪ್ರಾಣ ತ್ಯಾಗ ಮಾಡಿದೆ.

Follow Us:
Download App:
  • android
  • ios