ವಿಷದ ಹಾವಿನಿಂದ ಮಾಲೀಕನನ್ನು ರಕ್ಷಿಸಿ ಜೀವ ಬಿಟ್ಟ ಶ್ವಾನ
ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಎಂದರೆ ಅದು ನಾಯಿ. ಇಂತಹ ನಾಯಿಯ ಮನಕಲುಕುವ ಘಟನೆಯೊಂದು ಇದೀಗ ಸುದ್ದಿಯಾಗುತ್ತಿದೆ. ಏನದು..?
ತಂಜಾವೂರು : ನಾಯಿ ನಿಯತ್ತಿಗಿಂತ ಮಿಗಿಲಾಗಿರುವುದು ಯಾವುದು ಇಲ್ಲ. ಮನುಷ್ಯನೊಂದಿಗೆ ಸದಾ ಸ್ನೇಹ, ನಿಯತ್ತಿನೊಂದಿಗೆ ಬದುಕುವ ಜೀವಿ ಇದು.
ಅದೇ ರೀತಿ ತಮಿಳುನಾಡಿನಲ್ಲಿ ನಾಯಿ ನಿಯತ್ತಿಗೆ ಸಾಕ್ಷಿಯಾದ ಮನಕಲುಕುವ ಘಟನೆಯೊಂದು ನಡೆದಿದೆ. ನಾಯಿ ಹಾವಿನೊಂದಿಗೆ ಹೋರಾಡಿ ತನ್ನ ಮಾಲಿಕನ ಜೀವ ಕಾಪಾಡಿದೆ ಹಾವು ಕಡಿದಿದ್ದು, ಈ ವೇಳೆ ಹಾವಿನಿಂದ ತನ್ನ ಮಾಲೀಕರನ್ನು ಕಾಪಾಡಿದೆ.
ತಮಿಳುನಾಡಿನ ವೆಂಗರಾಯನ ಕುಡಿಕಾಡು ಪ್ರದೇಶದ ರೈತ 50 ವರ್ಷದ ನಟರಾಜು ಬೆಳ್ಳಂಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗರ ಹಾವೊಂದು ಸ್ಥಳದಲ್ಲಿತ್ತು. ಹಾವು ಹೆಡೆ ಬಿಚ್ಚಿ ನಟರಾಜನ್ ಗೆ ಕಚ್ಚಲು ಯತ್ನಿಸಿದೆ. ಈ ವೇಳೆ ತಕ್ಷಣ ನಾಯಿ ಅಡ್ಡ ಬಂದು ಬೊಗಳಲಾರಂಭಿಸಿದೆ.
ಈ ವೇಳೆ ನಟರಾಜನ್ ಹಿಂದೆ ಸರಿದಿದ್ದು, ನಾಯಿಗೆ ಕಾವು ಕಚ್ಚಿದ್ದು, ಮಾಲೀಕನ ಕಾಪಾಡಿ ತನ್ನ ಪ್ರಾಣ ತ್ಯಾಗ ಮಾಡಿದೆ.