ಮುಂಬರುವ ವಿಧಾನಸಭೆ ಚುನಾವಣೆಗೆ  ಜೆಡಿಎಸ್​ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್​ ಗೆ ಸೆಡ್ಡು ಹೊಡೆದಿರುವ ರೆಬೆಲ್ ನಾಯಕರನ್ನು ಸೋಲಿಸಲೇಬೇಕೆಂದು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ  7  ಕ್ಷೇತ್ರಗಳ  ಗ್ರೌಂಡ್​ ರಿಪೋರ್ಟ್​ ತರಿಸಿಕೊಂಡಿರುವ ಜೆಡಿಎಸ್​ ವರಿಷ್ಠರು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಗೇಮ್​ ಪ್ಲಾನ್ ಮಾಡಿದ್ದಾರೆ.

ಬೆಂಗಳೂರು(ಜು.27): ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್​ ಗೆ ಸೆಡ್ಡು ಹೊಡೆದಿರುವ ರೆಬೆಲ್ ನಾಯಕರನ್ನು ಸೋಲಿಸಲೇಬೇಕೆಂದು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ 7 ಕ್ಷೇತ್ರಗಳ ಗ್ರೌಂಡ್​ ರಿಪೋರ್ಟ್​ ತರಿಸಿಕೊಂಡಿರುವ ಜೆಡಿಎಸ್​ ವರಿಷ್ಠರು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಗೇಮ್​ ಪ್ಲಾನ್ ಮಾಡಿದ್ದಾರೆ.

ಅಲ್ಲದೇ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ರೆಬೆಲ್ ನಾಯಕರನ್ನ ಸೋಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಅಲ್ಪ ಸಂಖ್ಯಾತ ಹಾಗೂ ಒಂದು ಕಾಲದಲ್ಲಿ ಜಮೀರ್​'ಗೆ ಆಪ್ತನಾಗಿದ್ದವರನ್ನೇ ಕಣಕ್ಕಿಳಿಸಲು ಗೌಡರು ಪ್ಲಾನ್ ಮಾಡಿದ್ದಾರೆ.

ಇನ್ನು ಮಾಗಡಿ ​ ಕ್ಷೇತ್ರಕ್ಕೆ ಎ.ಮಂಜು ಹಾಗೂ 2008 ರ ಮಾದರಿಯಲ್ಲೇ ಇಕ್ಬಾಲ್ ಅನ್ಸಾರಿಯನ್ನ ಸೋಲಿಸಲು ದೊಡ್ಡ ಗೌಡರು ಪ್ಲಾನ್ ಮಾಡಿಕೊಂಡಿದ್ದಾರೆ.