-ಅಯ್ಯಪ್ಪನ ಮೊರೆ ಹೋದ ಡಿಕೆಶಿ -ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ ಡಿ ಕೆ ಶಿವಕುಮಾರ್ -ಇಂದು ಶಬರಿಮಲೆಯಿಂದ ವಾಪಸ್ಸಾಗಲಿದ್ದಾರೆ.
ಬೆಂಗಳೂರು (ಜು. 21): ಡಿ.ಕೆ.ಶಿವಕುಮಾರ್ ಅಯ್ಯಪ್ಪನ ಮೊರೆ ಹೋಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಿನ್ನೆ ರಾತ್ರಿ ಡಿಕೆಶಿ ಮೈಸೂರಿನಿಂದ ಶಬರಿಮಲೆಗೆ ಹೊರಟಿದ್ದಾರೆ. ತಮ್ಮ ಆಪ್ತರ ಜೊತೆಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದಾರೆ.
ಐಟಿ ದಾಳಿ ವೇಳೆ ಶಬರಿಮಲೈಗೆ ಹರಕೆ ಹೊತ್ತಿದ್ದರು ಡಿ.ಕೆ.ಶಿವಕುಮಾರ್. ನಿನ್ನೆ ರಾತ್ರಿ ಆಪ್ತರ ಜೊತೆ ಮೈಸೂರಿನಲ್ಲೇ ಮಾಲಾಧಾರಣೆ ಮಾಡಿ ಶಬರಿಮಲೆಗೆ ಹೊರಟಿದ್ದಾರೆ. ಇಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ವಾಪಸ್ಸಾಗಲಿದ್ದಾರೆ.
