Asianet Suvarna News Asianet Suvarna News

ಅಗಸ್ಟಾ ಹಗರಣ: ವಾಯುಪಡೆ ಮಾಜಿ ಮುಖ್ಯಸ್ಥ ತ್ಯಾಗಿಗೆ ಜಾಮೀನು

ಎರಡು ಲಕ್ಷ ರೂ. ಠೇವಣಿ ಇಡುವಂತೆ ಆದೇಶಿಸಿರುವ ನ್ಯಾಯಾಲಯ, ತ್ಯಾಗಿ ಅವರಿಗೆ ನಗರ ಬಿಟ್ಟು ಹೊರಹೋಗದಂತೆ ಸೂಚಚಿಸಿದೆ.

Court Grants Bail to SP Tyagi in Agusta Case

ನವದೆಹಲಿ (ಡಿ. 26): ಅಗಸ್ಟಾ ವೆಸ್ಟ್’ಲ್ಯಾಂಡ್ ಹಗರಣ ಪ್ರಕರಣದಲ್ಲಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿಗೆ ಇಲ್ಲಿಯ ಸ್ಥಳೀಯ ನ್ಯಾಯಾಲಯ ಇಂದು ಜಾಮೀನು ನೀಡಿದೆ.

ಎರಡು ಲಕ್ಷ ರೂ. ಠೇವಣಿ ಇಡುವಂತೆ ಆದೇಶಿಸಿರುವ ನ್ಯಾಯಾಲಯ, ತ್ಯಾಗಿ ಅವರಿಗೆ ನಗರ ಬಿಟ್ಟು ಹೊರಹೋಗದಂತೆ ಸೂಚಚಿಸಿದೆ.

ಇತರ ಇಬ್ಬರು ಆರೋಪಿಗಳು- ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೇತಾನ್- ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಜ.4 ವಿಚಾರಣೆ ನಡೆಸಲಿದೆ.

ವಾಯುಪಡೆಯ ಮುಖ್ಯಸ್ಥರಾಗಿದ್ದಾಗ ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ತ್ಯಾಗಿ ಅವರ ಮೇಲಿದೆ.

Follow Us:
Download App:
  • android
  • ios