ಕಾಂಗ್ರೆಸ್ ರ್ಯಾಲಿಗೆ ಭಾರೀ ಟ್ರಾಫಿಕ್ ಜಾಮ್ ಬಿಸಿ
ಕಾಂಗ್ರೆಸ್ ಜನಾಶಿರ್ವಾದ ಸಮಾವೇಶಕ್ಕೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಬೆಂಗಳೂರು : ಕಾಂಗ್ರೆಸ್ ಜನಾಶಿರ್ವಾದ ಸಮಾವೇಶಕ್ಕೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಪ್ಯಾಲೇಸ್ ಗ್ರೌಂಡ್’ನಲ್ಲಿ ಜನಾಶಿರ್ವಾದ ಯಾತ್ರೆ ಸಮಾರೋಪ ನಡೆಯುತ್ತಿದ್ದು, ಇದರಿಂದ ಪ್ಯಾಲೇಸ್ ರಸ್ತೆ ಸುತ್ತ ಮುತ್ತಲ ಪ್ರದೇಶದಲ್ಲಿ ಕಿಲೋಮೀರ್’ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ.
ಸಮಾವೇಶದ ಪ್ರದೇಶಕ್ಕೆ ಆಗಮಿಸಲು ಕಾರ್ಯಕರ್ತರು ಹರಸಾಹಸ ಪಡುವಂತಾಗಿದೆ. ಟ್ರಾಫಿಕ್ ಜಾಮ್’ನಲ್ಲಿ ನೂರಾರು ಕಾರ್ಯಕರ್ತರು ಸಿಲುಕಿಕೊಂಡಿದ್ದು, ಬಸ್’ನಿಂದ ಇಳಿದು ಅನೇಕರು ನಡೆದುಕೊಂಡೇ ಹೋಗುತ್ತಿದ್ದಾರೆ.