Asianet Suvarna News Asianet Suvarna News

ಮಂಡ್ಯಕ್ಕೆ ಕಾವೇರಿ ನೀರು: ಸುಮಲತಾ ಬೆನ್ನಲ್ಲೇ, CMಗೆ ಕೈ ನಾಯಕನ ಮನವಿ

ಮಂಡ್ಯದ ರೈತರಿಗಾಗಿ ಕಾವೇರಿ ನೀರು ಹರಿಸಲು ಸಂಸದೆ ಸುಮಲತಾ ಮನವಿ ಮಾಡಿದ ಬೆನ್ನಲ್ಲೇ ಇದೀಗ ಕೈ ಮುಖಂಡರೋರ್ವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

Congress leader urges the CM release Cauvery water to Mandya after Sumalatha
Author
Bengaluru, First Published Jun 21, 2019, 2:07 PM IST

ಮಂಡ್ಯ [ಜೂ.21] : ಮಂಡ್ಯದಲ್ಲಿ  ನೀರು ಹರಿಸಲು ಕೆಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಇತ್ತ ಕೈ ನಾಯಕ ಚೆಲುವರಾಯಸ್ವಾಮಿ ಕೂಡ  ನೀರು ಹರಿಸಲು ಸಿಎಂ ಗೆ ಮನವಿ ಮಾಡಿದ್ದಾರೆ. 

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಕಠಿಣವಾದ ಬರಗಾಲದ ಛಾಯೆ ಇದ್ದು ಈ ನಿಟ್ಟಿನಲ್ಲಿ, ಸಿಎಂ ಕೂಡಲೇ ನಾಲೆಗಳಿಗೆ ನೀರು ಹರಿಸಲಿ ಎಂದರು ಚೆಲುವರಾಯಸ್ವಾಮಿ ಹೇಳಿದರು.

ಮಂಡ್ಯ ರೈತರ ಪರ ಕೇಂದ್ರದ ಮೊರೆ ಹೋದ ಸಂಸದೆ ಸುಮಲತಾ

ಈ ಬಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸಿಎಂ ಕೂಡಲೇ ಬೆಳೆಗಳಿಗೆ ನೀರು ಹರಿಸಬೇಕು.  ಕನಿಷ್ಠ 2TMC ನೀರು ಬಿಡಿಸಲಿ ಎಂದರು.

ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ: ದೂರು ದಾಖಲು

70 ಅಡಿ ನೀರು ಇದ್ದರೂ ನಾಲೆಗಳಿಗೆ ನೀರನ್ನು ಹರಿಸಿದ ಉದಾಹರಣೆಗಳಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೂಡಲೇ ಈ ವಿಚಾರವನ್ನು ಸಿಎಂ ಗಮನಕ್ಕೆ ತಂದು ನೀರು ಬಿಡಿಸಲಿ. ಈ ಮೂಲಕ ಸರ್ಕಾರ ಜಿಲ್ಲೆಯ, ರೈತರ ರಕ್ಷಣೆ ಮಾಡಬೇಕು ಎಂದರು.

Follow Us:
Download App:
  • android
  • ios