ಮಂಡ್ಯಕ್ಕೆ ಕಾವೇರಿ ನೀರು: ಸುಮಲತಾ ಬೆನ್ನಲ್ಲೇ, CMಗೆ ಕೈ ನಾಯಕನ ಮನವಿ
ಮಂಡ್ಯದ ರೈತರಿಗಾಗಿ ಕಾವೇರಿ ನೀರು ಹರಿಸಲು ಸಂಸದೆ ಸುಮಲತಾ ಮನವಿ ಮಾಡಿದ ಬೆನ್ನಲ್ಲೇ ಇದೀಗ ಕೈ ಮುಖಂಡರೋರ್ವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಂಡ್ಯ [ಜೂ.21] : ಮಂಡ್ಯದಲ್ಲಿ ನೀರು ಹರಿಸಲು ಕೆಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಇತ್ತ ಕೈ ನಾಯಕ ಚೆಲುವರಾಯಸ್ವಾಮಿ ಕೂಡ ನೀರು ಹರಿಸಲು ಸಿಎಂ ಗೆ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಕಠಿಣವಾದ ಬರಗಾಲದ ಛಾಯೆ ಇದ್ದು ಈ ನಿಟ್ಟಿನಲ್ಲಿ, ಸಿಎಂ ಕೂಡಲೇ ನಾಲೆಗಳಿಗೆ ನೀರು ಹರಿಸಲಿ ಎಂದರು ಚೆಲುವರಾಯಸ್ವಾಮಿ ಹೇಳಿದರು.
ಮಂಡ್ಯ ರೈತರ ಪರ ಕೇಂದ್ರದ ಮೊರೆ ಹೋದ ಸಂಸದೆ ಸುಮಲತಾ
ಈ ಬಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸಿಎಂ ಕೂಡಲೇ ಬೆಳೆಗಳಿಗೆ ನೀರು ಹರಿಸಬೇಕು. ಕನಿಷ್ಠ 2TMC ನೀರು ಬಿಡಿಸಲಿ ಎಂದರು.
ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ: ದೂರು ದಾಖಲು
70 ಅಡಿ ನೀರು ಇದ್ದರೂ ನಾಲೆಗಳಿಗೆ ನೀರನ್ನು ಹರಿಸಿದ ಉದಾಹರಣೆಗಳಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೂಡಲೇ ಈ ವಿಚಾರವನ್ನು ಸಿಎಂ ಗಮನಕ್ಕೆ ತಂದು ನೀರು ಬಿಡಿಸಲಿ. ಈ ಮೂಲಕ ಸರ್ಕಾರ ಜಿಲ್ಲೆಯ, ರೈತರ ರಕ್ಷಣೆ ಮಾಡಬೇಕು ಎಂದರು.