ಬಗರ್​ ಹುಕುಂ ರೈತರಿಗೆ ಭೂಮಿ ನೀಡಲು 1000 ರೂ. ಕಟ್ಟಿಸಿಕೊಳ್ಳುತ್ತೇವೆ, ಆದರೆ ನೈಸ್​ ಸಂಸ್ಥೆಗೆ ಎಕರೆಗೆ 10 ರೂ. ಅಂತೆ ಭೂಮಿ ನೀಡುತ್ತೇವೆ. ನೈಸ್​ ನಮ್ಮ ನೆಂಟ ಅಲ್ಲವೇ? ಎಂದು ಅಶೋಕ್​ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ (ಡಿ.02): ನೈಸ್​ ಅಕ್ರಮ ವರದಿಯು ಇಂದು ವಿಧಾನಸಭೆಯಲ್ಲಿ ಬಿಸಿಬಿಸಿ ವಾಗ್ವಾದಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ ನೈಸ್ ಅಕ್ರಮ ವರದಿ ಬಗ್ಗೆ ಪ್ರಸ್ತಾಪಿಸಿದ ಆರ್​.ಅಶೋಕ್​, ನೈಸ್​ ಅನ್ನೋದು ಬ್ರಹ್ಮಾಂಡ ಭ್ರಷ್ಟಾಚಾರ, ಕಾನೂನು ರೀತಿಯಲ್ಲಿ ಮೋಸ ಮಾಡುವುದು ಹೇಗೆ ಎಂದುದನ್ನು ನೈಸ್​ ಮೂಲಕ ತಿಳಿಯಬಹುದು ಎಂದು ಹೇಳಿದರು.

ರ್ ​ ಹುಕುಂ ರೈತರಿಗೆ ಭೂಮಿ ನೀಡಲು 1000 ರೂ. ಕಟ್ಟಿಸಿಕೊಳ್ಳುತ್ತೇವೆ, ಆದರೆ ನೈಸ್​ ಸಂಸ್ಥೆಗೆ ಎಕರೆಗೆ 10 ರೂ. ಅಂತೆ ಭೂಮಿ ನೀಡುತ್ತೇವೆ. ನೈಸ್​ ನಮ್ಮ ನೆಂಟ ಅಲ್ಲವೇ? ಎಂದು ಅಶೋಕ್​ ವ್ಯಂಗ್ಯವಾಡಿದ್ದಾರೆ.

ಅಶೋಕ್​ ಮಾತಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ನಿಮ್ಮ ಸರ್ಕಾರ ಇತ್ತಲ್ಲ ನೀವು ಏನು ಮಾಡಿದಿರಿ? ನೀವು ಕೂಡ ಈ ಹಗರಣದ ಭಾಗವಾಗಿದ್ದೀರಿ ಎಂದು ಅಶೋಕ್’ರಿಗೆ ಸವಾಲೆಸೆದರು.

ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಗ ನಿಮ್ಮ ಸರ್ಕಾರ ಇದೆಯಲ್ಲ ಕ್ರಮ ತೆಗೆದುಕೊಳ್ಳಿ ಎಂದು ಸವಾಲೆಸೆದರು.