Asianet Suvarna News Asianet Suvarna News

ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲು: ಕಂಪ್ಲೇಂಟ್ ಕೊಟ್ಟವರು ಯಾರು? ವಾರಸ್ದಾರನಿಂದ ಅವಾಂತರ!

ಸ್ಯಾಂಡಲ್'ವುಡ್'ನ ಪ್ರಸಿದ್ಧ ನಟ, ನಿರ್ಮಾಪಕ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ವಿರುದ್ಧ ತೋಟದ ಮನೆ ಬಾಡಿಗೆ ಹಣ ನೀಡದ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

Complaint Against Kiccha sudeep

ಚಿಕ್ಕಮಗಳೂರು(ಜು.12): ಸ್ಯಾಂಡಲ್'ವುಡ್'ನ ಪ್ರಸಿದ್ಧ ನಟ, ನಿರ್ಮಾಪಕ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ವಿರುದ್ಧ ತೋಟದ ಮನೆ ಬಾಡಿಗೆ ಹಣ ನೀಡದ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದ ದೀಪಕ್ ಮಯೂರ್ ವಾರಾಸ್ದಾರ ಧಾರವಾಹಿ ತಂಡದ ವಿರುದ್ದ ಮನೆ ಮಾಲೀಕ ಆರೋಪ ಮಾಡಿದ್ದಾರೆ.  ಬೈಗೂರು ಗ್ರಾಮದಲ್ಲಿರುವ ದೀಪಕ್ ಮನೆಯಲ್ಲಿ ವಾರಸದಾರ ತಂಡ 3 ತಿಂಗಳು ಧಾರವಾಹಿಯ ಚಿತ್ರೀಕರಣ ನಡೆಸಿತ್ತು. ಈ ವೇಳೆ ಚಿತ್ರೀಕರಣಕ್ಕಾಗಿ ತೋಟದ ಮನೆಗೆ ದಿನಕ್ಕೆ 6 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ಬಾಕಿ ಉಳಿದ 1.50 ಲಕ್ಷ ರೂಪಾಯಿ ಬಾಡಿಗೆ ಹಣವನ್ನು ಧಾರಾವಾಹಿ ತಂಡ ಇನ್ನೂ ನೀಡಿಲ್ಲ ಎಂದು ಮನೆ ಮಾಲಿಕ ಆರೋಪಿಸಿದ್ದಾರೆ.

ಅಲ್ಲದೆ ಈ ಧಾರವಾಹಿ ಚಿತ್ರೀಕರಣದ ವೇಳೆ ತೋಟದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿಸಿರುವ ಮಾಲಿಕ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ಮಾಪಕ ಕಿಚ್ಚ ಸುದೀಪ್ ಮತ್ತು  ಸಹ ನಿಮ್ರಾಪಕ ಮಹೇಶ್ ವಿರುದ್ಧ ದೂರು ನೀಡಿದ್ದಾರೆ.

Follow Us:
Download App:
  • android
  • ios