ಚಿಕ್ಕಲಟ್ಟನಹಳ್ಳಿ ಗ್ರಾಮದ ಕಮಲಮ್ಮ ಮಗ ತೀರಿಕೊಂಡಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಆದರೆ, ಈಗ ನಾನು ಯಾರಿಗೂ ಹಣ ಕೊಡಕ್ಕಾಗಲ್ಲಮ್ಮಾ, ಮೋದಿ  ಎಲ್ಲ ಕಡೆ ಬೀಗ ಹಾಕಿಬಿಟ್ಟಿದ್ದಾರೆ, ಬಸ್ ಚಾರ್ಜ್​ ಕೊಡುತ್ತೇನೆ, ಊರಿಗೆ ಹೋಗಿ ಅಂತ ಸಿಎಂ ಅಂದಿದ್ದಕ್ಕೆ ಬೇಸರಗೊಂಡ ಕಮಲಮ್ಮ ಕಣ್ಣೀರು ಹಾಕುತ್ತಾ  ಹೊರನಡೆದರು.

ಬೆಂಗಳೂರು(ಡಿ.15): ಕೇಂದ್ರ ಸರ್ಕಾರದ ನೋಟ್​ ಬ್ಯಾನ್​ ನಿರ್ಧಾರದ ಬಿಸಿ ತಮಗೂ ತಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿಯಲ್ಲಿ ಇಂದು ವರುಣಾದಿಂದ ಹಣಕಾಸಿನ ನೆರವು ಕೇಳಿ ಬಂದಿದ್ದ ಮಹಿಳೆಯೊಬ್ಬರಿಗೆ ಇದೇ ಕಾರಣ ನೀಡಿ ನೆರವು ನೀಡಲು ಸಿದ್ಧರಾಮಯ್ಯ ನಿರಾಕರಿಸಿದರು.

Add Asianetnews Kannada as a Preferred SourcegooglePreferred

ಚಿಕ್ಕಲಟ್ಟನಹಳ್ಳಿ ಗ್ರಾಮದ ಕಮಲಮ್ಮ ಮಗ ತೀರಿಕೊಂಡಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಆದರೆ, ಈಗ ನಾನು ಯಾರಿಗೂ ಹಣ ಕೊಡಕ್ಕಾಗಲ್ಲಮ್ಮಾ, ಮೋದಿ ಎಲ್ಲ ಕಡೆ ಬೀಗ ಹಾಕಿಬಿಟ್ಟಿದ್ದಾರೆ, ಬಸ್ ಚಾರ್ಜ್​ ಕೊಡುತ್ತೇನೆ, ಊರಿಗೆ ಹೋಗಿ ಅಂತ ಸಿಎಂ ಅಂದಿದ್ದಕ್ಕೆ ಬೇಸರಗೊಂಡ ಕಮಲಮ್ಮ ಕಣ್ಣೀರು ಹಾಕುತ್ತಾ ಹೊರನಡೆದರು.