Asianet Suvarna News Asianet Suvarna News

ಜಾರಕಿಹೊಳಿ ಹವಾ ಕಸಿಯಲು ಸಿಎಂ ಪ್ಲ್ಯಾನ್: ಬೆಳಗಾವಿ ವಿಭಜನೆ ಕಾರ್ಡ್?

ಜಾರಕಿಹೊಳಿ ಸಹೋದರರ ಹವಾ ಕಡಿಮೆ ಮಾಡಲು ಪ್ಲ್ಯಾನ್! ಬೆಳಗಾವಿ ಜಿಲ್ಲೆ ವಿಭಜನೆ ಕಾರ್ಡ್ ಬಳಿಸಿದ ಸಿಎಂ?!  ಇದ್ದಕ್ಕಿದ್ದಂತೇ ಹೋರಾಟಗಾರರು ಸಕ್ರೀಯಗೊಳ್ಳಲು ಕಾರಣ?

CM Kumarswamy coined divide of Belgaum distirict
Author
Bengaluru, First Published Sep 13, 2018, 2:54 PM IST

ಬೆಂಗಳೂರು(ಸೆ.13): ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಹವಾ ಕಡಿಮೆ ಮಾಡೋಕೆ ಕುಮಾರಸ್ವಾಮಿ ಜಾಣನಡೆ ಪ್ರದರ್ಶಿಸಿದ್ದಾರೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿರುವ ಕುಮಾರಸ್ವಾಮಿ, ಬೆಳಗಾವಿ ಜಿಲ್ಲೆ  ವಿಭಜನೆಯ ಪ್ರಸ್ತಾವನೆ ಬಳಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಜಿಲ್ಲೆಯನ್ನು ವಿಭಜನೆ ಮಾಡುವಂತೆ ಹೋರಾಟ ಮಾಡುತ್ತಿರುವ ಹೋರಾಟಗಾರರು ಇದ್ದಕ್ಕಿದ್ದಂತೆ  ಸಕ್ರಿಯಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದ್ದು, ಸಿಎಂ ಕುಮಾರಸ್ವಾಮಿ ಸೈಲೆಂಟಾಗಿ ತೆರೆಮರೆಯಲ್ಲೇ ಕಾರ್ಯತಂತ್ರ ರೂಪಿಸುತ್ತಿದ್ದಾರಾ ಎಂಬ ಗುಮಾನಿ ಎದ್ದಿದೆ.

"

ಸಿಎಂ ಕುಮಾರಸ್ವಾಮಿ ಶನಿವಾರ ಬೆಳಗಾವಿಗೆ ಭೇಟಿ ನೀಡಲಿದ್ದು, ಈ ವೇಳೆಯಲ್ಲಿಯೇ ವಿಭಜನೆ ಕೂಗು ಜೋರಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹೋರಾಟಗಾರ ಸಂಗಪ್ಪಗೋಳ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎನ್ನಲಾಗಿದೆ.
 

Follow Us:
Download App:
  • android
  • ios