ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಗೆ ಜೆಡ್+ ಭದ್ರತೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಸರ್ಕಾರ ಜೆಡ್+ ಭದ್ರತೆಯನ್ನು ಒದಗಿಸಿದೆ. ಕೇವಲ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸಚಿವರು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ಕೆಲವು ಆಯ್ದ ಅಧಿಕಾರಿಗಳಿಗೆ ಮಾತ್ರ ಜೆಡ್+ ಭದ್ರತೆಯನ್ನು ನೀಡಲಾಗುತ್ತದೆ.
ನವದೆಹಲಿ (ಮಾ.30): ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಸರ್ಕಾರ ಜೆಡ್+ ಭದ್ರತೆಯನ್ನು ಒದಗಿಸಿದೆ. ಕೇವಲ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸಚಿವರು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ಕೆಲವು ಆಯ್ದ ಅಧಿಕಾರಿಗಳಿಗೆ ಮಾತ್ರ ಜೆಡ್+ ಭದ್ರತೆಯನ್ನು ನೀಡಲಾಗುತ್ತದೆ.
ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 36 ಮಂದಿಗೆ ಜೆಡ್+ ಭದ್ರತೆ ನೀಡಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಆದಿತ್ಯನಾಥ್ ಗೆ ಜೆಡ್+ ಭದ್ರತೆ ಒದಗಿಸಲಾಗಿದೆ. ಜೀವಭಯ ಇಲ್ಲದ ಸಂದರ್ಭದಲ್ಲಿ ಜೆಡ್+ ಭದ್ರತೆಯನ್ನು ಗೃಹ ಇಲಾಖೆ ವಾಪಸ್ ತೆಗೆದುಕೊಳ್ಳಬಹುದು.