ಮೈಸೂರಿಗೆ ಸಿಬಿಐ ಅಧಿಕಾರಿಗಳು.. ಕಪ್ಪು ಹಣದ ಡೀಲಿಂಗ್ ಬಗ್ಗೆ ತೀವ್ರ ತನಿಖೆ
ಮೈಸೂರಿನ ರಾಷ್ಟ್ರೀಕೃತ ಬ್ಯಾಂಕ್`ವೊಂದರಲ್ಲಿ ಚಿಕ್ಕರಾಯಪ್ಪ ಆಪ್ತ, ಸಂಬಂಧಿಕರು ಕಪ್ಪು ಹಣ ನೀಡಿ ಹೊಸ ನೋಟು ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಂಕ್ ವಹಿವಾಟಿನ ಬಗ್ಗೆ ತನಿಖೆ ನಡೆಯುತ್ತಿದೆ.
ಮೈಸೂರು(ಡಿ.02): ಸಿಎಂ ಆಪ್ತ, ಸರ್ಕಾರಿ ಅಧಿಕಾರಿ ಚಿಕ್ಕರಾಯಪ್ಪ ಮನೆ ರೇಡ್ ಬಳಿಕ ೊಂದೊಂದೇ ಮಾಹಿತಿಗಳು ಹೊರಬೀಳುತ್ತಿವೆ. ಇದೀಗ, ಕಪ್ಪು ಹಣದ ಜಾಡು ಹಿಡಿದಿರುವ ಸಿಬಿಐ ತಂಡ ಮೈಸೂರಿಗೆ ಬಂದು ಇಳಿದಿದೆ.
ಮೈಸೂರಿನ ರಾಷ್ಟ್ರೀಕೃತ ಬ್ಯಾಂಕ್`ವೊಂದರಲ್ಲಿ ಚಿಕ್ಕರಾಯಪ್ಪ ಆಪ್ತ, ಸಂಬಂಧಿಕರು ಕಪ್ಪು ಹಣ ನೀಡಿ ಹೊಸ ನೋಟು ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಂಕ್ ವಹಿವಾಟಿನ ಬಗ್ಗೆ ತನಿಖೆ ನಡೆಯುತ್ತಿದೆ.