4 ರಸ್ತೆ ಸಾರಿಗೆ ನಿಗಮಗಳು ಇನ್ನು ಸ್ವಾಯತ್ತ
2016-17ನೇ ಸಾಲಿನ ಸರ್ಕಾರಿ ಕಾಲೇಜುಗಳ ಪರಿಶಿಷ್ಟಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ನೀಡಲು
ಕಾಳಿ ನದಿಯಿಂದ ಸೂಪಾ ಅಣೆಕಟ್ಟೆಯಿಂದ ಉತ್ತರ ಕನ್ನಡದ ಅಳಿಯಾಳ ಕೆರೆಗಳಿಗೆ ನೀರು ತಂಬಿಸಲು ರೂ. 220ಕೋಟಿ
ಫುಟ್ ಖರಾಬು ಎ ಜಮೀನುಗಳನ್ನು ವ್ಯವ ಸಾಯೇತರ ಉದ್ದೇಶಕ್ಕೆ ಪರಿವರ್ತಿಸುವ ದಂಡ ಸಹಿತ ಅನುಮತಿಗೆ 1966ರ ಭೂ ಕಂದಾಯ ನಿಯಮಗಳಿಗೆ ತಿದ್ದುಪಡಿ ತರುವುದು
ಬೆಂಗಳೂರಿನ ಇಂದಿರಾನಗರದಲ್ಲಿ ಕರ್ನಾಟಕ ಎಂಡೋಕ್ರೋನಾಲಾಜಿ ಮತ್ತು ಸಂಶೋಧನಾ ಸಂಸ್ಥೆ ಕಟ್ಟಡ, ಉಪಕರಣಕ್ಕಾಗಿ 35ಕೋಟಿ
ಕೇಂದ್ರ ಸರ್ಕಾರದ ನೀಲಿ ಕ್ರಾಂತಿ ಯೋಜನೆಯಂತೆ ಮೀನು ಕೊಳ ನಿರ್ಮಾಣಕ್ಕೆ ಶೇ.50ರಷ್ಟುಸಬ್ಸಿಡಿ ನೀಡುವುದು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೂಲಸೌಕರ್ಯಕ್ಕೆ 80ಕೋಟಿ
ದುರ್ನಡತೆ: ಬಿಬಿಎಂಪಿ ಚುನಾವಣಾ ತಹಸೀಲ್ದಾರ್ ಕೆ. ಕೇಶವರಾಜು ಸೇವೆ ವಜಾ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 7737 ಆರೋಗ್ಯ ಸಹಾಯಕಿಯರಿಗೆ ಕಂಪ್ಯೂಟರ್ ಟ್ಯಾಬ್ ವಿತರಣೆಗೆ
33 ಉದ್ಯೋಗ ವಿನಿಮಯ ಕೇಂದ್ರಗಳ ಉನ್ನತೀಕರಣಕ್ಕೆ ರೂ.15ಕೋಟಿ ಕಮಾಂಡ್ ಸೆಂಟರ್ ಮತ್ತು ಗುಪ್ತ ವಾರ್ತೆ ಸಂಬಂಧಿಸಿದ ಪ್ರಧಾನ ಕಚೇರಿ ನಿರ್ಮಾಣಕ್ಕೆ ರೂ. 80ಕೋಟಿ
ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಇನ್ನು ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳಾಗಲಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ, ಕೆಎಸ್ಆರ್ಟಿಸಿ ಮತ್ತು ಉತ್ತರ ಕರ್ನಾಟಕ ಭಾಗದ ಎರಡು ಸಂಸ್ಥೆ ಗಳೂ ಸೇರಿದಂತೆ ನಾಲ್ಕು ಸಂಸ್ಥೆಗಳು ಒಂದೇ ಆಡಳಿತ ವ್ಯಾಪ್ತಿಯಲ್ಲಿವೆ. ಅವುಗಳು ಇನ್ನು ಮುಂದೆ ತಮ್ಮದೇ ಆಡಳಿತ ಮತ್ತು ಹಣಕಾಸು ಹಂಚಿಕೆ, ನೇಮಕ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಾಗಲಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಭೂಸ್ವಾಧೀನ ಸರಳ: ರಾಜ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಬಡಾವಣೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಕಷ್ಟವಾಗಿತ್ತು. ಅದನ್ನು ಸರಿಪಡಿಸಿ ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಪ್ರಕಾರ ರಾಜ್ಯದ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ನಿರ್ಧರಿಸಿದೆ. ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಈತನಕ ಹಿಂದಿನ ಕೆಐಎಡಿಬಿ ಕಾಯ್ದೆ ಪ್ರಕಾರವೇ ಭೂ ಸ್ವಾಧೀನ ಮಾಡುತ್ತಿದ್ದು, ಪರಿಹಾರ ಹಂಚಿಕೆ ಬಗ್ಗೆ ಅಸಮಾಧಾನಗಳು ಬರುತ್ತಿವೆ. ಆದ್ದರಿಂದ ಕೇಂದ್ರದ ಕಾಯ್ದೆ ಪ್ರಕಾರ ತಿದ್ದುಪಡಿ ಮಾಡಿ ಹೊಸ ನಿಯಮ ರೂಪಿಸಲಾಗುವುದು ಎಂದು ವಿವರಿಸಿದರು.
ಪ್ರಶಸ್ತಿಗೆ ಆಯ್ಕೆಗೆ ಸಮಿತಿ: ಗಣ ರಾಜ್ಯೋತ್ಸವ ವೇಳೆ ನೀಡಲಾಗುವ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಕನ್ನಡ ಮತ್ತು ಮುತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಇರುತ್ತಾರೆ ಎಂದು ಜಯಚಂದ್ರ ಹೇಳಿದರು. ಉಡುಪಿ ಜಿಲ್ಲೆಯ ಬೆಳಪುವಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ರೂ.126ಕೋಟಿ ವೆಚ್ಚದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕಾಗಿ ಈಗಾಗಲೇ 125 ಎಕರೆ ಜಾಗ ದೊರೆತಿದ್ದು, ಆರಂಭಿಕ ರೂ.16ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಜಲಕಾಯ ಇನ್ನು ಸೂಕ್ಷ್ಮ ವಲಯ: ರಾಜ್ಯಾದ್ಯಂತ ವೆಟ್ಲ್ಯಾಂಡ್ (ಜಲಕಾಯ)ಗಳನ್ನು ಗುರುತಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗುತ್ತಿದ್ದು, ಸಮಿತಿಗಳಿಗೆ ಒಂದು ತಿಂಗಳ ಗಡುವು ವಿಧಿಸಲಾಗುತ್ತಿದೆ. ರಾಜ್ಯದಲ್ಲಿ ವೆಟ್ಲ್ಯಾಂಡ್ಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ 2010ರ ವೆಟ್ಲ್ಯಾಂಡ್ (ಜಲಕಾಯ) ನಿಯಮಗಳ ಪ್ರಕಾರ ರಾಜ್ಯದಲ್ಲಿ ವೆಟ್ಲ್ಯಾಂಡ್ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕಿದೆ.