ಕಂಡಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅವಗಢ
ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಹೊಗುತ್ತಿದ್ದ ಕ್ರಿಸ್ತರಾಜ್ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿದೆ. ಇನ್ನೇನು ಕ್ಷಣಾರ್ಧದಲ್ಲಿ ಹೊಳೆಯ ಕಡೆ ಸಾಗಿ ತುಂಗಾ ನದಿ ಪಾಲಾಗಬೇಕೆನ್ನುವಸ್ಟರಲ್ಲಿ ಅದೇ ಬಸ್ಸಿನ ಕಂಡಕ್ಟರ್ ಕೂಡಲೇ ಸ್ಟೇರಿಂಗ್ ಹಿಡಿದು ತಿರುಗಿಸಿ ಬಸ್ಸನ್ನು ರಸ್ತೆಯತ್ತ ಮುಖ ಮಾಡುವ ಹಾಗೆ ಮಾಡಿದ್ದಾರೆ. . ಅಷ್ಟೊತ್ತಿಗಾಗಲೇ ಗಾಬರಿಗೊಂಡ ಕೆಲ ಪ್ರಯಾಣಿಕರು ಹಾರಲು ಹೋಗಿ ಮೈ ಕೈ ಗಾಯ ಮಾಡಿಕೊಂಡಿದ್ದಾರೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ತೀರ್ಥಹಳ್ಳಿ (ಜೂ.27): ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಹೊಗುತ್ತಿದ್ದ ಕ್ರಿಸ್ತರಾಜ್ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿದೆ. ಇನ್ನೇನು ಕ್ಷಣಾರ್ಧದಲ್ಲಿ ಹೊಳೆಯ ಕಡೆ ಸಾಗಿ ತುಂಗಾ ನದಿ ಪಾಲಾಗಬೇಕೆನ್ನುವಸ್ಟರಲ್ಲಿ ಅದೇ ಬಸ್ಸಿನ ಕಂಡಕ್ಟರ್ ಕೂಡಲೇ ಸ್ಟೇರಿಂಗ್ ಹಿಡಿದು ತಿರುಗಿಸಿ ಬಸ್ಸನ್ನು ರಸ್ತೆಯತ್ತ ಮುಖ ಮಾಡುವ ಹಾಗೆ ಮಾಡಿದ್ದಾರೆ. . ಅಷ್ಟೊತ್ತಿಗಾಗಲೇ ಗಾಬರಿಗೊಂಡ ಕೆಲ ಪ್ರಯಾಣಿಕರು ಹಾರಲು ಹೋಗಿ ಮೈ ಕೈ ಗಾಯ ಮಾಡಿಕೊಂಡಿದ್ದಾರೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದರು.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಪ್ರಯಾಣಿಕರ ಪ್ರಾಣ ಉಳಿಸಿದ ಕಂಡಕ್ಟರ್ ಭಗವಾನ್ ಪ್ರಯಾಣಿಕರ ಪಾಲಿನ ಭಗವಂತನಾಗಿದ್ದಾರೆ.