ಗೌರಿ ಲಂಕೇಶ್​ ಹತ್ಯೆ ನಡೆದ ಸ್ವಲ್ಪ ಸಮಯದಲ್ಲೇ ಗ್ಲೋಬಲ್​ ಕಾಲೇಜ್​ ಬಳಿ ಆತನ ಮೊಬೈಲ್​ ಸ್ವಿಚ್​ ಆನ್​ ಆಗಿ ಮತ್ತೆ ಸ್ವಿಚ್​ ಆಫ್​ ಆಗಿದೆ.

ಬೆಂಗಳೂರು(ಸೆ.11): ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಮಹತ್ವದ ಸುಳಿವೊಂದು ಸಿಕ್ಕಿದೆ. ತನಿಖೆ ಚುರುಕುಗೊಳಿಸಿದ ಎಸ್​'ಐಟಿ ಪೊಲೀಸರು ಹಂತಕನ ಜಾಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜರಾಜೇಶ್ವರಿನಗರದಲ್ಲಿ ವಶಪಡಿಸಿಕೊಂಡಿದ್ದ ಸಿಸಿ ಕ್ಯಾಮರ ದೃಶ್ಯ ಪರಿಶೀಲಿಸಿದ ಎಸ್'ಐಟಿಗೆ ಹಂತಕನ ಕುರಿತು ಮಹತ್ವದ ಸುಳಿವು ಸಿಕ್ಕಿದೆ. 3 ತಿಂಗಳಿಂದ ಆರ್​.ಆರ್​. ನಗರದಲ್ಲಿನ ಗೌರಿ ಲಂಕೇಶ್​​ ಮನೆ ಸುತ್ತ ಅನುಮಾನ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುವುದಲ್ಲದೇ ಆತನ ಮೊಬೈಲ್​​'ನ್ನ ಪದೇ ಪದೇ ಸ್ವಿಚ್​ ಆಫ್,​ ಆನ್​ ಮಾಡುವುದು ಸ್ವಿಚ್​ ಆಫ್​ ಮಾಡುವುದು ಮಾಡಿದ್ದಾನೆ.

ಗೌರಿ ಲಂಕೇಶ್​ ಹತ್ಯೆ ನಡೆದ ಸ್ವಲ್ಪ ಸಮಯದಲ್ಲೇ ಗ್ಲೋಬಲ್​ ಕಾಲೇಜ್​ ಬಳಿ ಆತನ ಮೊಬೈಲ್​ ಸ್ವಿಚ್​ ಆನ್​ ಆಗಿ ಮತ್ತೆ ಸ್ವಿಚ್​ ಆಫ್​ ಆಗಿದೆ. ಈತನ ಅನುಮಾನಸ್ಪದ ನಡವಳಿಕೆ ಗ್ಲೋಬಲ್​ ಕಾಲೇಜ್​ ಸಮೀಪದ ಸಿಸಿ ಕ್ಯಾಮರವೊಂದರಲ್ಲಿ ಸೆರೆಯಾಗಿದೆ. ಹಂತಕನ ಬೆನ್ನತ್ತಿದ ಎಸ್​'ಐಟಿ ಅಧಿಕಾರಿಗಳು ಆಂಧ್ರ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.