ಇನ್ನೆರಡು ಅಥವಾ ಮೂರು ತಿಂಗಳಲ್ಲಿ ಬೇನಾಮಿ(ನಕಲಿ ಹೆಸರು) ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ದೊಡ್ಡ ಯೋಜನೆಯನ್ನು ಸರಕಾರ ಹೊರತರಲಿದೆಯಂತೆ.

ನವದೆಹಲಿ(ನ. 15): ಐನ್ನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನ ರದ್ದು ಮಾಡುವ ಸರಕಾರದ ಕ್ರಮ ದೇಶಾದ್ಯಂತ ಜನಜೀವನದ ಮೇಲೆ ಪರಿಣಾಮ ಬೀರಿದೆ. ಸರಕಾರದ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಆದರೆ, ಸರಕಾರ ಇದೊಂದೇ ಕ್ರಮಕ್ಕೆ ಸೀಮಿತವಾಗುವಂತೆ ತೋರುತ್ತಿಲ್ಲ. ಇಂಥ ಇನ್ನೂ ಕೆಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸರಕಾರ ಯೋಜಿಸಿದೆ. ಬೇನಾಮಿ ಆಸ್ತಿಗಳನ್ನು ಮಟ್ಟಹಾಕುವುದು ಸರಕಾರದ ಮುಂದಿನ ಗುರಿ ಆಗಿದೆ.

Add Asianetnews Kannada as a Preferred SourcegooglePreferred

ಇನ್ನೆರಡು ಅಥವಾ ಮೂರು ತಿಂಗಳಲ್ಲಿ ಬೇನಾಮಿ(ನಕಲಿ ಹೆಸರು) ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ದೊಡ್ಡ ಯೋಜನೆಯನ್ನು ಸರಕಾರ ಹೊರತರಲಿದೆಯಂತೆ.

ಭಾರೀ ಮಟ್ಟದಲ್ಲಿ ಗ್ರಾಮೀಣ ಯೋಜನೆ:
ಗ್ರಾಮೀಣ ಭಾಗದ ಬಡ ಜನರನ್ನು ಸಶಕ್ತಗೊಳಿಸುವ ಬೃಹತ್ ಯೋಜನೆಯೊಂದನ್ನು ಆರಂಭಿಸಲು ಸರಕಾರ ಯೋಜಿಸಿರುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ. ಮುಂದಿನ ವರ್ಷ, ಅಥವಾ 2018ರಲ್ಲಿ ಈ ಯೋಜನೆ ಕೈಗೂಡುವ ಸಾಧ್ಯತೆ ಇದೆ. ಇದರ ಜೊತೆಗೆ ಮೂಲಭೂತ ಸೌಕರ್ಯಕ್ಕೆ ಚೇತರಿಕೆ ನೀಡುವ ಯೋಜನೆಯೂ ಸರಕಾರದ ಟ್ಯಾಸ್ಕ್ ಲಿಸ್ಟ್’ನಲ್ಲಿದೆ ಎನ್ನಲಾಗಿದೆ.

ಇಟ್ಟ ಹೆಜ್ಜೆ ಹಿಂಸರಿಯದಿರಲು ನಿರ್ಧಾರ:
ನೋಟು ರದ್ದು ಮಾಡುವ ಸರಕಾರದ ಕ್ರಮಕ್ಕೆ ಕೆಲ ವಲಯಗಳಿಂಗ ಭಾರೀ ವಿರೋಧ ವ್ಯಕ್ತವಾಗಬಹುದೆಂದು ಸರಕಾರ ಮೊದಲೇ ಅಂದಾಜಿಸಿತ್ತು. ಆದರೆ, ಜನಸಾಮಾನ್ಯರು ಸರಕಾರದ ಪರವಾಗಿ ನಿಂತಿರುವುದರಿಂದ ಯಾವುದೇ ಕಾರಣಕ್ಕೂ ಈ ಮಹತ್ವದ ಕ್ರಮವನ್ನು ಹಿಂಪಡೆದುಕೊಳ್ಳಬಾರದೆಂದು ಸರಕಾರ ನಿರ್ಧರಿಸಿದೆ. ನಿನ್ನೆ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಈ ವಿಚಾರವನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.