(ವಿಡಿಯೋ) ಜೀವಂತವಾಗಿ ಮರಳಿದರೆ ಅನುಭವ ಹೇಳ್ತೀನಿ ಅಂದಿದ್ದ ಅನಿಲ್...!
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಬೆಂಗಳೂರು(ನ.07): ಹೆಲಿಕಾಪ್ಟರ್'ನಲ್ಲಿ ಹತ್ತುತ್ತಿರುವುದು ಇದೇ ಮೊದಲು,ಶೂಟ್ ಮುಗಿಸಿಬಂದು ಅನುಭವ ಹೇಳ್ತಿನಿ ಅಂದಿದ್ಧ ಖಳ ನಟ ಅನಿಲ್ ಬಾರದ ಲೋಕಕ್ಕೆ ಪಯಣ ಬಳಸಿದ್ದಾರೆ.
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಒಂದು ಪ್ಲೋರ್ ಮೇಲಿನಿಂದ ಕೆಳಗೆ ಬಗ್ಗಿ ನೋಡಿದರೆ ನನಗೆ ತಲೆ ಸುತ್ತವಂತೆ ಆಗುತ್ತದೆ ಎನ್ನುವ ಖಳನಟ ಉದಯ್ ಇಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಜಲಾಶಯಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಶೂಟಿಂಗ್ ಹೋಗುವ ಮುನ್ನ ಅನಿಲ್ ಸುವರ್ಣ ನ್ಯೂಸ್ ನೊಂದಿಗೆ ಕೊನೆಯದಾಗಿ ಮಾತನಾಡಿದ ವಿಡಿಯೋ ತುಣುಕು ಇಲ್ಲಿದೆ ನೋಡಿ.