Asianet Suvarna News Asianet Suvarna News

ಮತ್ತೆ ಜಾರಕಿಹೊಳಿ ಸಹೋದರರಿಗೆ ಹೆಬ್ಬಾಳ್ಕರ್‌ ಎಚ್ಚರಿಕೆ?

ಸುಖಾಸುಮ್ಮನೇ ನನ್ನನ್ನು ಯಾರಾ​ದರೂ ಕೆಣಕಿದರೆ ಸುಮ್ಮ​ನಿ​ರು​ವುದೂ ಇಲ್ಲ ಎಂದು ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾ​ಳ್ಕರ್‌ ಜಾರಕಿಹೊಳಿ ಸಹೋದರರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Again Lakshmi Hebbalkar Warning To Jarkiholi Brothers
Author
Bengaluru, First Published Oct 1, 2018, 8:45 AM IST

ದಾವ​ಣ​ಗೆರೆ: ಪಂಚ​ಮ​ಸಾಲಿ ಸಮಾ​ಜದ ದಿಟ್ಟಹೆಣ್ಣು ಮಗಳು ನಾನು. ನಾನಾಗಿ ಯಾರ ಸುದ್ದಿಗೂ ಹೋಗಲ್ಲ. ಸುಖಾಸುಮ್ಮನೇ ನನ್ನನ್ನು ಯಾರಾ​ದರೂ ಕೆಣಕಿದರೆ ಸುಮ್ಮ​ನಿ​ರು​ವುದೂ ಇಲ್ಲ ಎಂದು ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾ​ಳ್ಕರ್‌ ಜಾರಕಿಹೊಳಿ ಸಹೋದರರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಹರಿ​ಹರದಲ್ಲಿ ನಡೆದ ವೀರ​ಶೈವ ಲಿಂಗಾ​ಯತ ಪಂಚ​ಮ​ಸಾಲಿ ಪೀಠದ ಡಾ.ಮ​ಹಾಂತ ಶಿವಾ​ಚಾರ್ಯ ಶ್ರೀ​ಗಳ ಜಯಂತಿಯಲ್ಲಿ ಮಾತ​ನಾ​ಡಿ, ವೀರ ರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯ​ಣ್ಣ ಸಹ ಬೆಳ​ಗಾ​ವಿ​ಯ​ವರು. ಹೆಣ್ಣು-ಗಂಡು ಸಮಾ​ನ​ವಾಗಿ ಬೆಳೆ​ಸಿದ ನೆಲ ಬೆಳ​ಗಾವಿ ಎಂದು ಗುಡುಗಿದರು.

ಬೆಳ​ಗಾವಿ ರಾಜ​ಕೀಯ ಸದ್ಯಕ್ಕೆ ತಣ್ಣ​ಗಾ​ಗಿದೆ. ಕಾಂಗ್ರೆಸ್‌ ವರಿ​ಷ್ಠರು ಇಲ್ಲಿಗೆ ಬಂದು, ನಮ್ಮೆ​ಲ್ಲರ ಜೊತೆಗೆ ಮಾತ​ನಾ​ಡಿ ಎಲ್ಲಾ ವಿಚಾ​ರಕ್ಕೂ ಅಂತ್ಯ ಹಾಡಿ​ದ್ದಾರೆ. ನಾನು ಬೇರೆ​ಯ​ವರ ಮನೆ ಇಣುಕಿ ನೋಡು​ವು​ದಿಲ್ಲ. ನನ್ನ ಮನೆ​ಯಲ್ಲಿ ನನಗೆ ಜೀವನ ಮಾಡಲು ಬಿಡಿ. ನನ್ನ ತಂಟೆಗೆ ಬಂದರೆ ಸುಮ್ಮ​ನಿ​ರು​ವ​ವಳೂ ನಾನಲ್ಲ. ಬಹು​ತೇಕ ಕಡೆ ನನ್ನ ಕಾರ​ಣ​ದಿಂದಾಗಿ ಬೆಳ​ಗಾವಿ ಹೆಣ್ಣು ಮೆಟ್ಟಿದ ನಾಡು ಎಂಬು​ದಾ​ಗಿಯೂ ಜನ ಮಾತ​ನಾ​ಡು​ತ್ತಿ​ದ್ದಾರೆ. ಅಂತಹ ವೀರ ರಾಣಿ ಕಿತ್ತೂರು ಚನ್ನ​ಮ್ಮನ ಸಮಾ​ಜದ ದಿಟ್ಟಹೆಣ್ಣು ಮಗಳು ನಾನು ಎಂದು ಯಾರ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.

ಸಂಜಯ್‌ ಅಣ್ಣನಿಗೆ ನಾನು ಉತ್ತರ ಕೊಡಲ್ಲ: ಲಕ್ಷ್ಮೀ

‘ಅಣ್ಣ​ನ​ವರ ಮಾತು ಮಾತಿಗೂ ನಾನು ಉತ್ತರ ಕೊಡೋ​ದಿಲ್ಲ. ನಾಲ್ಕು ತಿಂಗಳ ಹಿಂದೆಯೇ ಕ್ಷೇತ್ರದ ಜನ ಉತ್ತರ ಕೊಟ್ಟಿ​ದ್ದಾರೆ. ಇನ್ನೂ ಉತ್ತರ ಬೇಕೆಂದರೆ, ನಾಲ್ಕೂ​ವರೆ ವರ್ಷದ ಮೇಲೆ ನಾನೇ ಉತ್ತರ ನೀಡು​ತ್ತೇನೆ’ ಎಂದು ಮಾಜಿ ಶಾಸಕ ಸಂಜಯ್‌ ಪಾಟೀ​ಲ್‌ಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಟಾಂಗ್‌ ನೀಡಿ​ದ್ದಾರೆ.

ಬೆಳ​ಗಾವಿ ಜಿಲ್ಲೆಯ ರಾಜ​ಕಾ​ರ​ಣಿ​ಗಳೂ ಸೇರಿ​ದಂತೆ ಎಲ್ಲ​ರಿಗೂ ಅಣ್ಣ​ನ​ವರ ಭಾಷೆ, ಸಂಸ್ಕೃತಿ ಬಗ್ಗೆ ಗೊತ್ತಿದೆ. ಒಂದು ವೇಳೆ ಉತ್ತರ ಬೇಕೆಂದರೆ ನಾಲ್ಕೂ​ವರೆ ವರ್ಷದ ನಂತರ ನನ್ನ ವಿರುದ್ಧ ಚುನಾ​ವ​ಣೆಗೆ ಸ್ಪರ್ಧಿ​ಸಲಿ ಎಂದು ತಿಳಿಸಿದ್ದಾರೆ.

ಸಮಯ ಬಂದಾಗ ಆಮಿಷದ ವಿಚಾರಕ್ಕೆ ಉತ್ತರ:  ಬಿಜೆ​ಪಿ​ಯ​ವರು .30 ಕೋಟಿ ಹಾಗೂ ಸಚಿವ ಸ್ಥಾನದ ಆಮಿ​ಷ​ವನ್ನು ತಮಗೆ ಒಡ್ಡಿದ್ದ ಬಗ್ಗೆ ನನ್ನ ಪಕ್ಷದ ವರಿ​ಷ್ಠರೊಂದಿಗೆ ಚರ್ಚಿ​ಸು​ತ್ತೇನೆ. ಬಿ.ಎ​ಸ್‌.​ಯ​ಡಿ​ಯೂ​ರ​ಪ್ಪ​ನ​ವರ ಬಗ್ಗೆ ನನಗೆ ಅಭಿ​ಮಾ​ನ​ವಿದೆ. ಸಮಯ ಬಂದಾಗ ಬಿಜೆ​ಪಿಯ ಆಮಿಷದ ವಿಚಾ​ರ​ಕ್ಕೆ ಉತ್ತ​ರಿ​ಸುವೆ ಎಂದು ತಿಳಿಸಿದರು.

Follow Us:
Download App:
  • android
  • ios