Asianet Suvarna News Asianet Suvarna News

ಬೆಂಗಳೂರಿನ ಪ್ರತಿಷ್ಟಿತ ಕ್ಷೇತ್ರದಿಂದ ರೂಪ ಅಯ್ಯರ್ ಸ್ಪರ್ಧೆ ?

ಬೆಂಗಳೂರಿನ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು ಈಗಾಗಲೇ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವ ಮಾತುಗಳು ಕೇಳಿಬರುತ್ತಿವೆ

Actress Roopa iyer Meet Prakash Javdekar

ಚಿತ್ರನಟಿ, ನಿರ್ದೇಶಕಿ, ಬರಹಗಾರ್ತಿ ರೂಪ ಅಯ್ಯರ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬೆಂಗಳೂರಿನ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು ಈಗಾಗಲೇ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವ ಮಾತುಗಳು ಕೇಳಿಬರುತ್ತಿವೆ.

ಆದರೆ ಮಾಜಿ ಮೇಯರ್ ಕೆ. ವೆಂಕಟೇಶ್ ಮೂರ್ತಿ ಈ ಬಾರಿ ಸ್ಪರ್ಧಿಸುವುದು ಬಹುತೇಕ ಹೆಚ್ಚಿದೆ. ಕಳೆದ ಬಾರಿ ಬಿಜೆಪಿಯಿಂದ  ಸ್ಪರ್ಧಿಸಿ 3ನೇ ಸ್ಥಾನ ಪಡೆದುಕೊಂಡಿದ್ದರು. ಪ್ರಸ್ತುತ ಶಾಂತಿನಗರವನ್ನು ಎನ್.ಎ.ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ. 2ನೇ ಸ್ಥಾನವನ್ನು ಜೆಡಿಎಸ್'ನಿಂದ ಸ್ಪರ್ಧಿಸಿದ್ದ ಕೆ. ವಾಸುದೇವ್ ಮೂರ್ತಿ ಪಡೆದಿದ್ದರು.

Follow Us:
Download App:
  • android
  • ios