Asianet Suvarna News Asianet Suvarna News

ರಾಜ್ಯದ 33 ತಹಶೀಲ್ದಾರ್ ವರ್ಗಾವಣೆ

ಮೈತ್ರಿ ಸರ್ಕಾರದ ಗೊಂದಲದ ನಡುವೆಯೇ ವರ್ಗಾವಣೆ ಪರ್ವ ಜೋರಾಗಿ ನಡೆದಿದೆ. ಸರ್ಕಾರ ಒಟ್ಟು 33 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

33 Tahsildar Transferred In Karnataka
Author
Bengaluru, First Published Jul 14, 2019, 8:36 AM IST

ಬೆಂಗಳೂರು [ಜು.14] :  ರಾಜ್ಯದ ವಿವಿಧ ತಾಲೂಕುಗಳ 33 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಮೈತ್ರಿ ಸರ್ಕಾರದ ಗೊಂದಲದ ನಡುವೆಯೇ ಭರ್ಜರಿಯಾಗಿ ವರ್ಗಾವಣೆ ಪರ್ವ ನಡೆದಿದ್ದು, ಇದರ ಭಾಗವಾಗಿ ಕಂದಾಯ ಇಲಾಖೆಯು ಈ ಆದೇಶ ಹೊರಡಿಸಿದೆ.

ವರ್ಗಾವಣೆ ಅಧಿಕಾರಿಗಳ ವಿವರ:

ಪ್ರಕಾಶ್‌ ಗಾಯಕ್‌ವಾಡ್‌- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಂ.ಸಿ.ಬಣಸಿ- ಬೆಳಗಾವಿ ವಿಭಾಗದ ಪ್ರಾದೇಶಿಕ ಕಚೇರಿಯ ತಹಶೀಲ್ದಾರ್‌, ಲಕ್ಷ್ಮೇ - ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್‌, ಶಿವಪ್ಪ ಲಮಾಣಿ- ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಿಎನ್‌ಎಲ್‌ ವಿಭಾಗದ ಡಿಎಸ್‌ಸ್‌ಪಿ ಉಪ ನಿರ್ದೇಶಕರು, ಎಂ.ಕೆ.ಶಾರದ- ಬೆಂಗಳೂರಿನ ಭೂಮಿ ಮಾನಿಟರ್‌ ಸೆಲ್‌ನ ತಹಶೀಲ್ದಾರ್‌, ಎ.ತಿಪ್ಪೇಸ್ವಾಮಿ- ಹುಣಸಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ವಿವೇಕ್‌ ವಿ.ಶೆಣೈ- ಹೊನ್ನಾವರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಚ್‌.ವಿ.ಪ್ರಸನ್ನ ಮೂರ್ತಿ - ಶೃಂಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಪ್ರಕಾಶ್‌ ಹೊಸಮನಿ ಗುರುಮಿಟ್ಕಲ್‌ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಶ್ರೀಧರ್‌ ಆಚಾರ್‌- ವಡಗೇರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ಕೆ. ಮಂಜುನಾಥ್‌- ಕೊಪ್ಪಳ ತಾಲೂಕು ಗ್ರೇಡ್‌ 1, ನವೀನ್‌ ಹೂಲ್ಲೂರ- ನವಲಗುಂದ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಶೋಭಿತಾ - ಅಣ್ಣೇಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಪಿ.ಸಿ.ಕಲಬುರಗಿ - ಎಸ್‌ಎಲ್‌ಎಓ ಕಚೇರಿ ವಿಶೇಷ ತಹಶೀಲ್ದಾರ್‌, ಕೆ.ಶಿವರಾಜ್‌ - ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ಜಿ.ಬಿ.ನಾಗಭೂಷಣ್‌ - ಚಾಮರಾಜನಗರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಜೆ.ಮಹೇಶ್‌ - ಬಿಎಂಆರ್‌ಸಿಎಲ್‌ ತಹಶೀಲ್ದಾರ್‌, ರವಿಚಂದ್ರ - ರೇರಾ ತಹಶೀಲ್ದಾರ್‌, ಶಾಂತಲಾ ಚಂದನ್‌- ನಿಡಗುಂದಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ನೀಲಪ್ರಭಾ - ಕಾಳಗಿ ತಾಲೂಕು ತಹಶೀಲ್ದಾರ್‌, ರವಿರಾಜ್‌ ದೀಕ್ಷಿತ್‌- ಕುಕನೂರು ತಾಲೂಕು ತಹಶೀಲ್ದಾರ್‌, ಯೋಗಾನಂದ - ತುಮಕೂರು ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಂ.ಶ್ರೀನಿವಾಸಯ್ಯ - ಯಲಹಂಕ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ಮಂಜುನಾಥ್‌- ದೇವನಹಳ್ಳಿ ತಾಲೂಕು ತಹಶೀಲ್ದಾರ್‌, ಸಂಗಮನಾಥ ಎಚ್‌. ಮಳ್ಳಿಗೇರಿ - ಬಬಲೇಶ್ವರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ರಾಜ್‌ಕುಮಾರ್‌ ಜಾಧವ್‌- ಯಾದಗಿರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ಚಂದ್ರಶೇಖರ್‌. ಆರ್‌.ಜಿ - ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಗ್ರೇಡ್‌ 2. ಜೆ.ಬಿ.ಮಜಗಿ - ಮುನ್ಸಿಪಲ್‌ ತಹಶೀಲ್ದಾರ್‌, ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ, ಸೂಮಶೇಖರ್‌ - ರಟ್ಟಿಹಳ್ಳಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಬಿ.ಕೆ.ಸುದರ್ಶನ್‌ -ಚನ್ನಪಟ್ಟಣ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

Follow Us:
Download App:
  • android
  • ios