ರಾಜ್ಯದ ಮೇಕೆದಾಟು ಯೋಜನೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಮೇಕೆದಾಟು ಯೋಜನೆ ವಿರೋಧಿಸಿ ಗಲಾಟೆಗಿಳಿದ ಎಐಎಡಿಎಂಕೆ ಸದಸ್ಯರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ.

ನವದೆಹಲಿ[ಜ.02] ಎಐಎಡಿಎಂಕೆ ಸದಸ್ಯರ ಅತಿರೇಕದ ವರ್ತನೆಗೆ ಬೇಸತ್ತ ಸ್ಪೀಕರ್ ಸುಮಿತ್ರಾ ಮಹಾಜನ್ 26 ಸಂಸದರನ್ನು ಅಮಾನತು ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಕೆದಾಟು ಕಾಮಗಾರಿ ಕಾರ್ಯ ಯೋಜನೆಯ ವರದಿಯನ್ನು ಸಿದ್ಧಪಡಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಸಂಸದರು ವಿರೋಧ ವ್ಯಕ್ತಪಡಿಸಿ ಗಲಾಟೆಗೆ ಇಳಿದರು. ಇನ್ನು 5 ದಿನದ ಕಲಾಪಕ್ಕೆ ಈ ಅಮಾನತುಗೊಂಡ ಸದಸ್ಯರು ಹಾಜರಾಗುವಂತಿಲ್ಲ.

ಮೇಕೆದಾಟು ಡ್ಯಾಂ ನಿರ್ಮಿಸಿದರೆ ಏನೇನು ಮುಳುಗತ್ತೆ?

ವ್ಯಯವಾಗುತ್ತಿರುವ ನೀರು ಬಳಸಿಕೊಳ್ಳುವುದು ಮತ್ತು ಬೆಂಗಳೂರಿಗೆ ಕುಡಿಯುವ ನೀರು ತರುವ ಉದ್ದೇಶಿತ ಯೋಜನೆಗೆ ದಶಕಗಳ ಇತಿಹಾಸವಿದೆ. ಕೇಂದ್ರ ಸರಕಾರ ಈ ಬಗ್ಗೆ ವರದಿ ಸಿದ್ಧಮಾಡಿ ಎಂದು ಹೇಳಿರುವುದಕ್ಕೆ ತಮಿಳುನಾಡು ಕ್ಯಾತೆ ತೆಗೆದಿದೆ.