‘‘.500, 1,000ದ ನೋಟುಗಳನ್ನು ಅಮಾನ್ಯಗೊಳಿಸಿ​ದಾಗ, ಚಲಾವಣೆಯಿಂದ ವಾಪಸ್‌ ಪಡೆದ ನೋಟುಗಳ ಅಂತರವನ್ನು ತುಂಬಲಷ್ಟೇ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು.

ನವದೆಹಲಿ(ಡಿ.13): ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2 ಸಾವಿರ ಮುಖಬೆಲೆಯ ಹೊಸ ನೋಟು​ಗಳು ಕೂಡ ಮುಂದಿನ 5 ವರ್ಷಗಳೊಳಗಾಗಿ ಅಮಾನ್ಯಗೊಳ್ಳಲಿದೆ ಎಂದು ಆರೆಸ್ಸೆಸ್‌ ಜೊತೆ ನಿಕಟ ಸಂಬಂಧ ಹೊಂದಿರುವ ಖ್ಯಾತ ಚಾರ್ಟರ್ಡ್‌ ಅಕೌಂಟೆಂಟ್‌ ಎಸ್‌ ಗುರು​ಮೂರ್ತಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಇನ್ನು ದೇಶದಲ್ಲಿ .500ರ ನೋಟುಗಳಷ್ಟೇ ಅಧಿಕ ಮುಖಬೆಲೆಯ ನೋಟುಗಳಾಗಿ ಉಳಿಯ​ಲಿದೆ ಎಂದೂ ಅವರು ತಿಳಿಸಿದ್ದಾರೆ.
‘ಇಂಡಿಯಾ ಟುಡೇ'ಗೆ ನೀಡಿದ ಸಂದರ್ಶನದಲ್ಲಿ ಗುರುಮೂರ್ತಿ ಅವರು ಈ ವಿಚಾರ ತಿಳಿಸಿದ್ದು, ಸರ್ಕಾರ ಮತ್ತು ಆರ್‌ಬಿಐನ ನೀತಿನಿಬಂಧನೆಗಳನ್ನು ತಾವೂ ಅರಿತಿರುವಂತೆ ಅವರು ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಗುರುಮೂರ್ತಿ ಅವರು ಆರೆಸ್ಸೆಸ್‌ ಬೆಂಬಲಿತ ವಿವೇಕಾನಂದ ಇಂಡಿಯಾ ಪ್ರತಿಷ್ಠಾನದ ಪ್ರಮುಖ ಸದಸ್ಯರೂ ಆಗಿದ್ದಾರೆ.
ಹೊಸನೋಟು ಇರಲ್ಲ: ‘‘.500, 1,000ದ ನೋಟುಗಳನ್ನು ಅಮಾನ್ಯಗೊಳಿಸಿ​ದಾಗ, ಚಲಾವಣೆಯಿಂದ ವಾಪಸ್‌ ಪಡೆದ ನೋಟುಗಳ ಅಂತರವನ್ನು ತುಂಬಲಷ್ಟೇ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ಹೀಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಈ ಹೊಸ ನೋಟನ್ನೂ ಅಮಾನ್ಯಗೊಳಿ​ಸಲಾ​ಗುವುದು. ಸಣ್ಣ ಮುಖಬೆಲೆಯ ನೋಟು​ಗಳತ್ತ ಮುಖಮಾಡುವುದು ಸರ್ಕಾರದ ಉದ್ದೇಶ. ಅದರಂತೆ, 500ರ ನೋಟು ಇನ್ನು ಅತಿ ಹೆಚ್ಚಿನ ಮುಖಬೆಲೆಯ ನೋಟು ಆಗಿರಲಿದೆ,'' ಎಂದಿದ್ದಾರೆ ಗುರುಮೂರ್ತಿ.
ಆರ್ಥಿಕಪೋಖ್ರಾನ್‌: ‘‘ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರವು ಆರ್ಥಿಕ ಪೋಖ್ರಾನ್‌ಗೆ ಸಮ,'' ಎಂದೂ ಅವ​ರು ಬಣ್ಣಿ​ಸಿದ್ದಾರೆ. ಯಾವಾಗ ಜನರಲ್ಲಿ ಸಾಕಷ್ಟುಹಣವಿರುತ್ತದೋ, ಅವರು ಅನಗತ್ಯ​ವಾಗಿ ವೆಚ್ಚ ಮಾಡಲು ಶುರು​ಮಾಡುತ್ತಾರೆ. ಇದರಿಂದ ಬೇಜವಾಬ್ದಾರಿ​ಯುತ ದುಂದು​ವೆಚ್ಚಕ್ಕೆ ಕಾರಣಲಾಗುತ್ತದೆ. ಈ ನಿಟ್ಟಿನಲ್ಲಿ, ನೋಟು ಅಮಾನ್ಯವು ಬದಲಾವಣೆ ತರ ಲಿದೆ. ಪೋಖ್ರಾನ್‌ ಪರೀಕ್ಷೆ ಅನಿರೀಕ್ಷಿತ ಬದಲಾವಣೆಯನ್ನು ಉಂಟು ಮಾಡಿದಂತೆ ಇದೂ ಮಾಡುತ್ತೆ ಎಂದಿ​ದ್ದಾ​ರೆ.

(http://epaper.kannadaprabha.in)