ತಾಯಿ ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.
ಹೈದರಾಬಾದ್(ಜು.18): ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದೆ. ಡ್ರಗ್ಸ್ ಕೇಸ್ನಲ್ಲಿ ತೆಲುಗು ನಟ ರವಿತೇಜಾ ಸೇರಿದಂತೆ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಟ ತರುಣ್, ನಿರ್ದೇಶಕ ಪೂರಿ ಜಗನ್ನಾಥ್, ನಟಿಯರಾದ ಚಾರ್ಮಿ, ಮುಮೈತ್ ಖಾನ್ಗೆ ಸೇರಿ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ತಿಂಗಳ 19 ರಿಂದ 27ರವರೆಗೂ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇತ್ತೀಚೆಗೆ ರವಿತೇಜಾ ತಮ್ಮ ಇದೇ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಆದ್ರೆ ಈ ರವಿತೇಜಾ ಸೇರಿ ಹಲವರಿಗೆ ನೋಟಿಸ್ ನೀಡಿರೋದು ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದೆ.
ಈ ನಡುವೆ ರವಿತೇಜ ಅವರ ತಾಯಿ ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.
ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರಿ ಪವಿತ್ರ ಪುರ್ ಸಹ ' ತಮ್ಮ ತಂದೆ ಹೆಸರು ತಳುಕುಹಾಕಿಕೊಂಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಮೂರ್ಖತನದ ವದಂತಿಗಳು. ಖ್ಯಾತವ್ಯಕ್ತಿ ಎಂಬ ಕಾರಣಕ್ಕೆ ತಮ್ಮ ತಂದೆಯ ಹೆಸರನ್ನು ಎಲ್ಲಡೆ ಎಳೆಯಲಾಗುತ್ತಿದೆ. ಈ ರೀತಿಯ ಪ್ರಕರಣಗಳಲ್ಲಿ ಸಿಲಿಕುಕೊಂಡು ಅವರು ತಮ್ಮ ಉಜ್ವಲ ಭವಿಷ್ಯ ಹಾಗೂ ಕುಟುಂಬದ ಸಂಬಂಧವನ್ನು ಹಾಳು ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದಾರೆ.

