ಹಿರಿಯ ರಂಗಕರ್ಮಿ ಎಸ್ ಮಾಲತಿ ವಿಧಿವಶ
ಹಿರಿಯ ರಂಗಕರ್ಮಿ, ನಿರ್ದೇಶಕಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು (ಏ. 01): ಹಿರಿಯ ರಂಗಕರ್ಮಿ, ನಿರ್ದೇಶಕಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ದೆಹಲಿ ನಾಟಕಶಾಲೆಯಲ್ಲಿ ರಂಗ ಅಧ್ಯಯನ ಮಾಡಿದ್ದರು. ಸಾಕಷ್ಟು ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ.
ರಂಗಕರ್ಮಿ ಮಾಲತಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.