ರಾಹುಲ್ ಕುಹಕವಾಡಿದ್ದ ವಂದೇ ಮಾತರಂ ರೈಲು ಯಶಸ್ವಿ ಸಂಚಾರ!
ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾದ ವರ್ಷದಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದು, ತನ್ನೆಲ್ಲ ವೆಚ್ಚವನ್ನೂ ಭರಿಸುವಷ್ಟು ಶಕ್ತಿ ಪಡೆದಿದೆ. ಆ ಮೂಲಕ ಸ್ವದೇಶಿ ನಿರ್ಮಿತ ಹೆಚ್ಚಿನ ರೈಲು ನಿರ್ಮಾಣಕ್ಕೆ ಮನಸ್ಸು ಮಾಡಲು ಭಾರತಕ್ಕೆ ಎಲ್ಲಿಲ್ಲದ ವಿಶ್ವಾಸ ಬಂದಾಂತಾಗಿದೆ.
ನವದೆಹಲಿ (pg.21): ಸಂಪೂರ್ಣ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ಪ್ರೆಸ್, ಭಾರತೀಯ ರೈಲ್ವೆಯ ಪಾಲಿಗೆ ಭರ್ಜರಿ ಯಶಸ್ಸನ್ನು ತಂದುಕೊಂಡುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಕಾರಣ, ರೈಲು ನಿರ್ಮಾಣಕ್ಕೆ ಮಾಡಿದ ವೆಚ್ಚ ಕೇವಲ 12-15 ತಿಂಗಳಲ್ಲಿ ರೈಲ್ವೆಗೆ ಮರಳಿ ಬರುವ ಸೂಚನೆಗಳು ಕಂಡುಬಂದಿವೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಸದಸ್ಯ ರಾಜೇಶ್ ಅಗರ್ವಾಲ್, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿರ್ಮಾಣಕ್ಕೆ ಅಂದಾಜು 100 ಕೋಟಿ ರು.ವೆಚ್ಚ ಮಾಡಲಾಗಿತ್ತು. ನವದೆಹಲಿ ಮತ್ತು ವಾರಾಣಸಿ ನಡುವೆ ವಾರಕ್ಕೆ 5 ದಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ.
ವಂದೇ ಭಾರತ್ ಟೀಕಿಸಿದ ರಾಹುಲ್ಗೆ ತಿರುಗೇಟು ನೀಡಿದ ಮೋದಿ
ಜೊತೆಗೆ ಎಲ್ಲಾ 5 ದಿನಗಳಲ್ಲೂ ರೈಲು ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರಿಂದ ತುಂಬಿರುತ್ತಿದೆ. ಇತರೆ ರೈಲುಗಳಲ್ಲಿ ಇರುವ ಯಾವುದೇ ರಿಯಾಯಿತಿ ಈ ರೈಲುಗಳಲ್ಲಿ ಇರುವುದಿಲ್ಲ. ಅಲ್ಲದೆ ಇತರೆ ರೈಲಿನ ಟಿಕೆಟ್ ದರಕ್ಕಿಂತ ಇದರ ದರವೂ ಸ್ವಲ್ಪ ಹೆಚ್ಚಿದೆ. ಹೀಗಾಗಿ ರೈಲು ಮಾಸಿಕ 7 ಕೋಟಿ ರು. ಆದಾಯ ಸಂಗ್ರಹಿಸುತ್ತಿದೆ. ಇದೇ ರೀತಿ ರೈಲಿನ ಆದಾಯ ಸಂಗ್ರಹ ಮುಂದುವರೆದರೆ 12-15 ತಿಂಗಳಲ್ಲಿ ರೈಲಿಗೆ ಮಾಡಿದ ವೆಚ್ಚ ಪೂರ್ಣ ಪ್ರಮಾಣದಲ್ಲಿ ಮರಳಲಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಕೆಟ್ಟು ನಿಂತ ಭಾರತದ ಅತೀ ವೇಗದ ರೈಲಿಗೇನಾಗಿತ್ತು?
ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.