ಕೆಟ್ಟು ನಿಂತ ಟ್ರೈನ್ 18 ವಂದೇ ಭಾರತ್ ಎಕ್ಸಪ್ರೆಸ್ ರೈಲು! ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ| ಚಕ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ| ತುಂಡ್ಲಾ ಜಂಕ್ಷನ್ನಿಂದ 15 ಕಿಲೋ ಮೀಟರ್ ದೂರದಲ್ಲಿ ಕೆಟ್ಟು ನಿಂತ ರೈಲು| ತಪಾಸಣೆ ಬಳಿಕ ವಾರಣಾಸಿ ತಲುಪಿದ ಟ್ರೈನ್ 18|
ನವದೆಹಲಿ(ಫೆ.16): ನಿನ್ನೆಯಷ್ಟೇ ಉದ್ಘಾಟನೆ ಭಾಗ್ಯ ಭಾರತದ ಮೊದಲ ಅತಿ ವೇಗದ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.
Add Asianetnews Kannada as a Preferred Source

ವಾರಣಾಸಿಯಿಂದ ಬರುತ್ತಿದ್ದ ರೈಲು ತುಂಡ್ಲಾ ಜಂಕ್ಷನ್ನಿಂದ 15 ಕಿಲೋ ಮೀಟರ್ ದೂರದಲ್ಲಿ ಕೆಟ್ಟು ನಿಂತಿದೆ. ಚಕ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.
Scroll to load tweet…
ರೈಲು ಹಳಿಯಲ್ಲಿ ಹಸುಗಳು ಓಡಾಡುತ್ತಿದ್ದಾಗ ಚಕ್ರ ಜಾರಿ ಈ ಘಟನೆ ನಡೆದಿದೆ. ಎಂಜಿನಿಯರ್ಗಳು ಈ ಬಗ್ಗೆ ತಪಾಸಣೆ ನಡೆಸುತ್ತಾರೆ ಎಂದು ಉತ್ತರ ರೈಲ್ವೆ ವಿಭಾಗದ ಸಿಪಿಆರ್ಒ ದೀಪಕ್ ಕುಮಾರ್ ತಿಳಿಸಿದ್ದಾರೆ.
