ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಇದೀಗ ಮೂರನೇ ಬಾರಿ ನೋಟಿಸ್ ನೀಡಿದೆ. ಮಾದಕ ವಸ್ತು ಜಾಲದ ವಿಚಾರವಾಗಿ ಈ ವಿಚಾರಣೆ ನಡೆಯಲಿದೆ. 

 ಬೆಂಗಳೂರು (ಜ.28): ಕನ್ನಡ ಚಿತ್ರರಂಗಕ್ಕೆ ಮಾದಕ ವಸ್ತು ನಂಟು ಪ್ರಕರಣದ ಸಂಬಂಧ ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರಿಗೆ ಮೂರನೇ ಬಾರಿಗೆ ಸಿಸಿಬಿ ವಿಚಾರಣೆ ಹಾಜರಾಗುವಂತೆ ನೋಟಿಸ್‌ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಕರಣದ ತನಿಖಾ ಉಸ್ತುವಾರಿ ಡಿಸಿಪಿ ಬಿ.ಎಸ್‌.ಅಂಗಡಿ ಅವರ ಮುಂದೆ ಹಾಜರಾಗುವಂತೆ ಇಂದ್ರಜಿತ್‌ ಅವರಿಗೆ ಸೂಚಿಸಲಾಗಿದೆ. 

ಪ್ರಕರಣದ ಸಂಬಂಧ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುವಂತೆ ಅವರಿಗೆ ಹೇಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಎರಡು ಬಾರಿ ಇಂದ್ರಜಿತ್‌ ಅವರನ್ನು ಸಿಸಿಬಿ ಪ್ರಶ್ನಿಸಿ ನಡೆಸಿ ಹೇಳಿಕೆ ಪಡೆದಿತ್ತು. ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು ಹಾಗೂ ಸೇರಿದಂತೆ ಹಲವು ಮಂದಿ ಮಾದಕ ವಸ್ತು ಜಾಲದಲ್ಲಿ ಸಿಲುಕಿದ್ದಾರೆ. ಮಾದಕ ವ್ಯಸನಿಗಳಿದ್ದಾರೆ ಎಂದು ಇಂದ್ರಜಿತ್‌ ಬಹಿರಂಗವಾಗಿ ಆರೋಪಿಸಿದ್ದರು.

ವಿಷ್ಣು ಚಿತ್ರ ನಿದೇರ್ಶನ ಮಾಡದ್ದಕ್ಕೆ ಬೇಸರವಿದೆ: ಇಂದ್ರಜಿತ್‌ ಲಂಕೇಶ್‌ ...

ತಮ್ಮ ಆರೋಪಕ್ಕೆ ಪುರಾಕವಾದ ಸಾಕ್ಷ್ಯಗಳಿವೆ ಎಂದು ಅವರು ಹೇಳಿಕೊಂಡಿದ್ದರು. ಇನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಹೀಗಾಗಿ ಮತ್ತೆ ಇಂದ್ರಜಿತ್‌ ಅವರನ್ನು ವಿಚಾರಣೆ ಕರೆದಿರುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.