ಇಂದು ವಿವಿಧ ರಾಶಿಗಳಿಗೆ ಭಾಗ್ಯದ ದಿನವಾಗಿದೆ
ಇಂದು ವಿವಿಧ ರಾಶಿಗಳಿಗೆ ಭಾಗ್ಯದ ದಿನವಾಗಿದೆ
ಮೇಷ : ಅಧಿಪತಿ ಭಾಗ್ಯದಲ್ಲಿದ್ದಾನೆ ಸ್ವಲ್ಪ ಮಟ್ಟಿಗೆ ಶುಭ ಆದರೆ ಶನಿಯುತನಾದ್ದರಿಂದ ಭಾಗ್ಯದಲ್ಲೂ ಜಗಳ-ಕಲಹ ಸಂಭವ.
ವೃಷಭ : ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ಸ್ತ್ರೀಯರಿಂದ ಲಾಭ. ಆದರೆ ರವಿಯುತನಾದ್ದರಿಂದ ಸ್ವಲ್ಪ ಕಲಹಾದಿಗಳು ಸಂಭವ
ಮಿಥುನ : ಉದ್ಯೋಗದಲ್ಲಿ ಪ್ರಗತಿ, ಸಂಸಾರದಲ್ಲಿ ಕಲಹ, ಅಷ್ಟಮದ ಕೇತು ದೇಹಬಾಧೆ ತರಲಿದ್ದಾನೆ, ಗಣಪತಿ ದರ್ಶನ ಮಾಡಿ
ಕಟಕ : ದೈವಾನುಕೂಲವಿದೆ, ಆರೋಗ್ಯ ತೊಂದರೆ ಸರಿಯಾಗಲಿದೆ, ಉತ್ತಮ ದಿನ, ಶೃಂಗೇರಿ ಭೇಟಿ ಮಾಡಿ
ಸಿಂಹ : ಭಾಗ್ಯ ಒಲಿದುಬರಲಿದೆ, ಸ್ತ್ರೀ ಸೌಖ್ಯ, ಆದರೆ ಸಣ್ಣಪುಟ್ಟ ಕಲಹಗಳೂ ಇವೆ. ಕೆಂಪು ವಸ್ತ್ರ ದಾನ ಮಾಡಿ
ಕನ್ಯಾ : ಕುಟುಂಬ ಸೌಖ್ಯ, ಧನ ಪ್ರಾಪ್ತಿ, ವಾಹನ ಅವಘಡ ಸಂಭವ, ಸುಬ್ರಹ್ಮಣ್ಯ ದರ್ಶನ ಮಾಡಿ
ತುಲಾ : ತೃತೀಯಭಾವದಲ್ಲಿ ಪಾಪ ಗ್ರಹಗಳಿದ್ದರೆ ಶುಭವೆಂಬ ಆಧಾರವಿದೆ, ಸಾಹಸ ಪ್ರದರ್ಶನ ಸಾಧ್ಯತೆ, ಛಲದ ಬದುಕು
ವೃಶ್ಚಿಕ : ಧನವ್ಯಯವಾಗುವ ಸಾಧ್ಯತೆ, ಗುರುವಿನ ಅನುಕೂಲವೂ ಇಲ್ಲ. ಸಾಧಾರಣ ದಿನವಾಗಿರಲಿದೆ. ನಾಗಾರಾಧನೆ ಮಾಡಿ
ಧನಸ್ಸು : ದ್ವತಿತೀಯದ ಕೇತುವಿನಿಂದ ಮಾತಿನಿಂದ ಕಲಹ, ಚತುರ್ಥದಲ್ಲಿನ ಶುಕ್ರನಿಂದ ವಾಹನ ಖರೀದಿ ಯೋಗ.
ಮಕರ : ಸುಖಾಧಿಪತಿ ವ್ಯಯದಲ್ಲಿರುವುದರಿಂದ ಬಾಧೆ, ಧನಾಧಿಪತಿಯೂ ವ್ಯಯಗತ, ಶನಿ-ಸುಬ್ರಹ್ಮಣ್ಯರ ದರ್ಶನ ಮಾಡಿ
ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿಯ ಕಾಲ, ಉತ್ತಮ ದಿನ, ಶಿವ ಧ್ಯಾನ ಮಾಡಿ
ಮೀನ : ಗುರುವಿನ ಅನುಗ್ರಹ ಬೇಕು, ಶೃಂಗೇರಿ, ಮಂತ್ರಾಲಯ, ಗಣಗಾಪುರ, ಶ್ರೀಧರಾಶ್ರಮಕ್ಕೆ ಹೋಗಿಬನ್ನಿ