Asianet Suvarna News Asianet Suvarna News

ಯಾವ ರಾಶಿಯವರಿಗೆ ಒಳಿತು – ಯಾರಿಗೆ ಕೆಡುಕು : ತಿಳಿಯಿರಿ ರಾಶಿ ಫಲ

ಯಾವ ರಾಶಿಯವರಿಗೆ ಒಳಿತು – ಯಾರಿಗೆ ಕೆಡುಕು : ತಿಳಿಯಿರಿ ರಾಶಿ ಫಲ

Dina Bhavishya April 25

ಯಾವ ರಾಶಿಯವರಿಗೆ ಒಳಿತು – ಯಾರಿಗೆ ಕೆಡುಕು : ತಿಳಿಯಿರಿ ರಾಶಿ ಫಲ

 

ಯಾವ ರಾಶಿಯವರಿಗೆ ಒಳಿತು – ಯಾರಿಗೆ ಕೆಡುಕು : ತಿಳಿಯಿರಿ ರಾಶಿ ಫಲ

 

ಮೇಷ

ವಾಹನ ವಿಲೇವಾರಿಯಲ್ಲಿ ಗಣನೀಯವಾದ

ಆದಾಯ ಗಳಿಸುವಿರಿ. ಸಮಾಜ ಸೇವೆಯಲ್ಲಿ

ಆಸಕ್ತಿ ಮೂಡಲಿದೆ. ಖುಷಿ ಹಂಚಲಿದ್ದೀರಿ.

 

ವೃಷಭ

ಇಷ್ಟಪಟ್ಟ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು

ಎದುರಾಗಲಿವೆ. ಕಾರು, ವಸ್ತ್ರ, ಆಭರಣಗಳ

ವ್ಯಾಪಾರಿಗಳಿಗೆ ಇದು ಶುಭಕಾಲವಾಗಿದೆ.

 

ಮಿಥುನ

ಔಷಧ, ಸ್ಟೀಲ್ ಮತ್ತು ಸಂಗೀತ ಕ್ಷೇತ್ರಗಳಲ್ಲಿ

ರುವವರಿಗೆ ಪ್ರಶಸ್ತವಾದ ದಿನವಿದು. ಆದಷ್ಟು

ಮೌನವಾಗಿದ್ದರೆ ಒಳ್ಳೆಯದು. ಜಾಗ್ರತರಾಗಿರಿ.

 

 

ಕಟಕ

ಕುಟುಂಬದವರ ಆರೋಗ್ಯದ ಸಮಸ್ಯೆಯು

ನಿವಾರಣೆಯಾಗಲಿದೆ. ಸ್ಥಳ ಬದಲಾವಣೆ

ಆಗುವ ನಿರೀಕ್ಷೆ ಇದೆ. ಅನಗತ್ಯ ಚಿಂತೆಬೇಡ.

 

ಸಿಂಹ

ನಿಮ್ಮ ದೇಹಕ್ಕೆ ಒಗ್ಗುವ ಪದಾರ್ಥಗಳನ್ನು

ಮಾತ್ರ ಸೇವಿಸುವುದು ಒಳಿತು. ಈ ದಿನ ನಿಮ್ಮ

ಆರೋಗ್ಯದಲ್ಲಿ ಏರುಪೇರಾಗಲಿದೆ. ಜೋಕೆ!

 

ಕನ್ಯಾ

ವಿದ್ಯಾರ್ಥಿಗಳಿಗೆ ಇದು ಒತ್ತಡದ ಸಮಯ.

ಧ್ಯಾನ-ಪ್ರಾಣಾಯಾಮಗಳನ್ನು ರೂಢಿಸಿ

ಕೊಂಡು ಒತ್ತಡವನ್ನು ನಿವಾರಿಸಿಕೊಳ್ಳಿರಿ.

 

ತುಲಾ

ನಿರಂತರ ಪ್ರಯಾಣವೇ ದಣಿವಿಗೆ ಕಾರಣ.

ನಿಮ್ಮ ಕಷ್ಟಕ್ಕೆ ಹಳೆಯ ಗೆಳೆಯರು ಬಂದು

ಸಹಕಾರ ನೀಡಲಿದ್ದಾರೆ. ಧೈರ್ಯವಾಗಿರಿ.

 

ವೃಶ್ಚಿಕ

ವಯಸ್ಸಾದವರು ಮನೆಯಲ್ಲಿದ್ದು ನಿಮ್ಮಿಂದ

ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ನಿಮ್ಮ

ಸಾಂತ್ವನದ ಮಾತುಗಳ ಅಗತ್ಯವು ಹೆಚ್ಚಾಗಿದೆ.

 

ಧನುಸ್ಸು

ದೂರ ಪ್ರಯಾಣದ ಯೋಗ. ಆರೋಗ್ಯ

ತಪಾಸಣೆ ಮಾಡಿಸಿಕೊಳ್ಳಿ. ಯೋಚಿಸಿ ನಿರ್ಧಾರ

ಕೈಗೊಳ್ಳಿ. ದುಡುಕದೆ ಸಮಚಿತ್ತ ಕಾಯ್ದುಕೊಳ್ಳಿ.

 

ಮಕರ

ಕತ್ತಲೆಯೇ ಯಾವಾಗಲು ಇರದು. ಸೂರ್ಯ

ಎಷ್ಟು ಹೊತ್ತು ಬಚ್ಚಿಟ್ಟುಕೊಂಡರೂ ಮೇಲೇರಿ

ಬಂದು ನಿಮ್ಮ ಬದುಕನ್ನು ಬೆಳಗಲೇಬೇಕು.

 

ಕುಂಭ

ನಿಮ್ಮ ಮನಸ್ಥಿತಿಗೆ ಈ ದಿನವು ಪೂರಕವಾಗಿದೆ.

ಯಾರಲ್ಲೂ ಜಗಳಕ್ಕೆ ಇಳಿಯದೇ ನೆಮ್ಮದಿ

ಯಿಂದಿರಿ. ಗ್ರಹಗತಿಗಳ ಲೆಕ್ಕಾಚಾರ ಬೇಡ.

 

ಮೀನ

ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಲು

ಇದು ಸೂಕ್ತ ಸಮಯ. ನಿರುದ್ಯೋಗಿಗಳಿಗೆ

ಬೇಗ ನೌಕರಿಗಳು ಸಿಗುವ ಸಂಭವ

Follow Us:
Download App:
  • android
  • ios