ಇಬ್ಬರು ಯುವಕರಿಗೆ ಒಬ್ಬಳ ಮೇಲೆಯೇ ಲವ್. ಆದ್ರೆ ಇದು ಅಂತ್ಯವಾಗಿದ್ದು ಮಾತ್ರ ದಾರುಣವಾಗಿ. ಅವಳು ನಂಗೇ ಬೇಕು ಎಂದು ಓಬ್ಬ ಮತ್ತೊಬ್ಬನನ್ನು ಕೊಂದೇ ಬಿಟ್ಟಿದ್ದಾನೆ.
ಶಿವಮೊಗ್ಗ [ಜ.20]: ಯುವತಿ ವಿಚಾರವಾಗಿ ಇಬ್ಬರು ಯುವಕರ ನಡುವಿನ ವೈಷಮ್ಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಪ್ರದೇಶದಲ್ಲಿ ತೋಹಿದ್ ಎಂಬ ಯುವಕ ಯುವತಿಯ ಪ್ರೀತಿ ವಿಚಾರಕ್ಕೆ ಮೊಹಮ್ಮದ್ ಅಲಿ [23] ಎಂಬಾತನನ್ನು ಕೊಲೆಗೈದಿದ್ದಾರೆ.
ಭಾನುವಾರ ಸಂಜೆ ವೇಳೆ ಹೋಟೆಲ್ ಬಳಿಯಲ್ಲಿ ತಿಂತಿದ್ದ ಮೊಹಮ್ಮದ್ ಅಲಿಗೆ ತೋಹಿದ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಓಮ್ನಿಯಲ್ಲಿ ಕೊಳೆತ ಮಹಿಳೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ..
ಈ ವೇಳೆ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮೊಹಮ್ಮದ್ ನನ್ನು ಕೋಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...
ದೊಡ್ಡಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
