ಸುಮಾರು 12 ವರ್ಷಗಳ ಗಂಡಾನೆಯನ್ನು ಬಂಧಿಸುವಲ್ಲಿ ಡಿಸಿಎಫ್‌ ಶಿವಶಂಕರ್‌ ನೇತೃತ್ವದ ಸಿಬ್ಬಂದಿ ತಂಡ ಮೈಸೂರು ಮತ್ತು ಹುಣಸೂರಿನಿಂದ ಬಂದಿದ್ದ ವೈದ್ಯರು ಮತ್ತು 8 ದಿನಗಳ ಪರ್ಯಂತ ಹಗಲು- ರಾತ್ರಿ ಶ್ರಮಪಡುವಂತಾಗಿತ್ತು.ಕೊನೆಗೂ ವಿದೇಶಿ ಅರಿವಳಿಕೆ ಮದ್ದಿನಿಂದ ಸೆರೆಹಿಡಿದು ನಿಟ್ಟುಸಿರುವ ಬಿಟ್ಟಿದ್ದಾರೆ.

ತೀರ್ಥಹಳ್ಳಿ (ಏ.1) : ಕಳೆದ ಮೂರು ತಿಂಗಳಿನಿಂದ ತಾಲೂಕಿನ ದೇವಂಗಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣವನ್ನು ಮೂಡಿಸಿದ್ದ ಕಾಡಾನೆಯನ್ನು ಗುರುವಾರ ಸಂಜೆ ದೇವಂಗಿ ಸಮೀಪದ ಮಳೂರು ಗ್ರಾಮದ ಬಳಿ ಎಂಪಿಎಂ ಪ್ಲಾಂಟೇಶನ್‌(MPM Plantation)ನಲ್ಲಿ ಗುರುವಾರ ಸಂಜೆ ವೇಳೆಗೆ ಸೆರೆಹಿಡಿಯಲಾಗಿದೆ. ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಬಂಧಿಸಿರುವ ಈ ಆನೆಯನ್ನು ನಾಗರಹೊಳೆ ವನ್ಯಜೀವಿ ವಿಭಾಗ(Nagarhole Wildlife Division)ಕ್ಕೆ ಕಳುಹಿಸಿಕೊಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 12 ವರ್ಷಗಳ ಗಂಡಾನೆಯನ್ನು ಬಂಧಿಸುವಲ್ಲಿ ಡಿಸಿಎಫ್‌ ಶಿವಶಂಕರ್‌(DCF Shivashankar) ನೇತೃತ್ವದ ಸಿಬ್ಬಂದಿ ತಂಡ ಮೈಸೂರು ಮತ್ತು ಹುಣಸೂರಿನಿಂದ ಬಂದಿದ್ದ ವೈದ್ಯರು ಮತ್ತು 8 ದಿನಗಳ ಪರ್ಯಂತ ಹಗಲು- ರಾತ್ರಿ ಶ್ರಮಪಡುವಂತಾಗಿತ್ತು. ಕಾಡಾನೆಯನ್ನು ಹಿಡಿಯುವ ಸಲುವಾಗಿ ಬಂದಿದ್ದ ಪಳಗಿದ ಆನೆಗಳಿಗೆ ಮಾತ್ರವಲ್ಲದೇ ಶಾಪ್‌ರ್‍ ಶೂಟರ್‌ಗಳ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಿತ್ತು. ಈ ಗಂಡಾನೆಯನ್ನು ಅಂತಿಮವಾಗಿ ಆನೆ ಸೆರೆಹಿಡಿಯಲು ಬಳಸಿರುವ ಅರಿವಳಿಕೆ ಮದ್ದನ್ನು ವಿದೇಶದಿಂದ ತರಿಸಲಾಗಿತ್ತು ಎಂದೂ ಹೇಳಲಾಗಿದೆ.

ಬ್ರಾಹ್ಮಣರ ಮೇಲೆ ಹರತಾಳು ಹಾಲಪ್ಪನ ದಬ್ಬಾ​ಳಿಕೆ ಇನ್ಮುಂದೆ ಸಹಿ​ಸಲ್ಲ: ಬ್ರಾಹ್ಮಣ ಮಹಾ ಮಹಾ​ಸ​ಭಾ

ಗೃಹ ಸಚಿವ ಆರಗ ಜ್ಞಾನೇಂದ್ರ(Home Minister Araga jnanendra) ಮಳೂರು ಗ್ರಾಮಕ್ಕೆ ಶುಕ್ರವಾರ ಮುಂಜಾನೆ ಭೇಟಿ ನೀಡಿ, ನಿರಂತರ ಕಾರ್ಯನಿರ್ವಹಿಸಿ ಗ್ರಾಮಸ್ಥರಿಗೆ ನೆಮ್ಮದಿ ನೀಡಿದ್ದೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆ ಶ್ಲಾಘಿ​ಸಿ ಅಭಿನಂದನೆಯನ್ನು ಸಲ್ಲಿಸಿದರುಸಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಆನೆ ಭಯದ ವಾತಾವರಣವನ್ನು ಮೂಡಿಸಿದ್ದು, ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಕಾಡಾನೆಯನ್ನು ಬಂಧಿಸುವ ಕಾರ್ಯ ದೊಡ್ಡ ಸವಾಲಿನದಾಗಿತ್ತು ಎಂದರು.

ಕಾರ್ಯಾಚರಣೆಗೆ ಈ ಭಾಗದ ಜನರು ಆನೆಗಳಿಗೆ ಹುಲ್ಲು ನೀಡುವ ಮೂಲಕ ನೀಡಿದ ನೆರವೂ ಸಹ ಸಹಕಾರಿಯಾಗಿದೆ. ಕಾಡಾನೆ ಸೇರಿದಂತೆ ಬಂಧಿಸುವ ಪ್ರಾಣಿಗಳ ಜೀವಕ್ಕೆ ಅಪಾಯವಾಗದಂತೆ ಕಾರ್ಯನಿರ್ವಹಿಸುವ ಅರಿವಳಿಕೆ ಔಷಧಿಯನ್ನು ವಿದೇಶದಿಂದ ತರಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆಗುಂಬೆ ಭಾಗದಲ್ಲಿ ಜನರನ್ನು ಕಾಡುತ್ತಿರುವ ಸಲಗವನ್ನೂ ಬಂಧಿಸಲು ಪ್ರೇರಣೆ ಮತ್ತು ಉತ್ತೇಜನವೂ ದೊರೆತಿದೆ. ಆದಷ್ಟುಶೀಘ್ರದಲ್ಲಿ ಆಗುಂಬೆ ಭಾಗದಲ್ಲಿ ಸಂಚರಿಸು ಕಾಡಾನೆಯನ್ನೂ ಬಂಧಿಸಬೇಕಿದೆ ಎಂದರು.

Karnataka election 2023: ಮತದಾರರಿಗೆ ಆಮಿಷ ಶಿಕ್ಷಾರ್ಹ ಅಪರಾಧ: ಡಿಸಿ...

ಆನೆ ಕಾರ್ಯಾಚರಣೆ ತಂಡದಲ್ಲಿ ಎಸಿಎಫ್‌ ಪ್ರಕಾಶ್‌, ಆರ್‌ಎಫ್‌ಓಗಳಾದ ಮಧುಕರ್‌, ಲೋಕೇಶ್‌, ಅರಿವಳಿಕೆ ತಜ್ಞರಾದ ಡಾ.ವಿನಯ್‌, ಹುಣಸೂರಿನ ಡಾ.ಮುಜೀಬ್‌, ಡಾ. ವಾಸೀಮ್‌ ಮೈಸೂರು, ಸಿಬ್ಬಂದಿ ಪುನೀತ್‌, ಪರಶುರಾಂ, ಪ್ರವೀಣ್‌, ಸಂದೇಶ್‌, ಚೇತನ್‌, ವಿಶ್ವನಾಥ್‌, ಶ್ರೀಧರ್‌, ಶಿವಕುಮಾರ್‌, ಶಶಿಧರ್‌ ಹಾಗೂ ಮಂಜುನಾಥ್‌ ಪಾಲ್ಗೊಂಡಿದ್ದರು.