Asianet Suvarna News Asianet Suvarna News

ರಾಯಚೂರು: ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು!

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಬೆಳೆಗಳು ಈಗಾಗಲೇ ಒಣಗಿ ಹೋಗಿದ್ದು, ರೈತರು ಮಹಾನಗರಗಳಿಗೆ ಗೂಳೇ ಹೋಗಲು ಮುಂದಾಗಿದ್ದಾರೆ, ಇನ್ನು ಕೆಲವು ರೈತರು ಉಳಿದ ಬೆಳೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್‌ಗಳಿಂದ ನೀರು ತಂದು ಹಾಕುತ್ತಿದ್ದಾರೆ.

Water from Tanker to Sustain Chilli Crop at Maski in Raichur grg
Author
First Published Nov 3, 2023, 9:46 PM IST

ಮಸ್ಕಿ(ನ.03):  ತಾಲೂಕಿನ ಬುದ್ದಿನ್ನಿ (ಎಸ್) ಗ್ರಾಮದ ರೈತ ಸಾಲ ಮಾಡಿಬೆಳೆದ ಮೆಣಸಿನ ಕಾಯಿ ಬೆಳೆ ಮಳೆ ಇಲ್ಲದೆ ಒಣಗುತ್ತಿದ್ದು, ಟ್ಯಾಂಕರ್‌ ಮೂಲಕ ನೀರನ್ನು ಹಾಕಿ ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಬೆಳೆಗಳು ಈಗಾಗಲೇ ಒಣಗಿ ಹೋಗಿದ್ದು, ರೈತರು ಮಹಾನಗರಗಳಿಗೆ ಗೂಳೇ ಹೋಗಲು ಮುಂದಾಗಿದ್ದಾರೆ, ಇನ್ನು ಕೆಲವು ರೈತರು ಉಳಿದ ಬೆಳೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್‌ಗಳಿಂದ ನೀರು ತಂದು ಹಾಕುತ್ತಿದ್ದಾರೆ.

ಕೈಕೊಟ್ಟ ಮಳೆ: ದಿನೇ ದಿನ ಬಿಗಡಾಯಿಸುತ್ತಿರುವ ಬರ..!

ಮಸ್ಕಿ ತಾಲೂಕನ್ನು 2ನೇ ಹಂತದಲ್ಲಿ ತೀವ್ರ ಬರಪೀಡಿತ ತಾಲೂಕು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ರೈತರು ಲಕ್ಷಾಂತರ ರುಪಾಯಿ ಸಾಲ ತಂದು ಬೆಳೆ ಮಾಡಿದ್ದು, ಮಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಮ್ಮ ಹೋಲದಲ್ಲಿ 5 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಮಳೆಯಾಗದೇ ಬೆಳೆಗಳು ಒಣಗುತ್ತಿವೆ. ಆದ್ದರಿಂದ 5 ಟ್ಯಾಂಕರ್‌ಗಳಿಂದ ಮೆಣಸಿನ ಗಿಡಗಳಿಗೆ ನೀರು ಹಾಕುತ್ತಿದ್ದೇವೆ ಎಂದು  ನಾಗಲಾಪೂರ ರೈತ ಮಲ್ಲಪ್ಪ ತಿಳಿಸಿದ್ದಾರೆ.  

Follow Us:
Download App:
  • android
  • ios