Asianet Suvarna News Asianet Suvarna News

ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!

ತಮ್ಮ ಹಲವಾರು ಕಾರ್ಯ ಒತ್ತಡಗಳ‌ ಮಧ್ಯೆಯೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜೂನ್ 1ರಂದು, ವಿಶೇಷ ಚೇತನ ಮಕ್ಕಳಿರುವ ಸಂಸ್ಥೆಯೊಂದಕ್ಕೆ ಭೇಟಿ ನೀಡಿ, ವಿಶೇಷ ಚೇತನ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದರು.

Vijayapura ZP CEO Rahul Sindhe Visit Rehabilitation Center for the Disabled gvd
Author
Bangalore, First Published Jun 2, 2022, 3:00 AM IST

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜೂ.02): ತಮ್ಮ ಹಲವಾರು ಕಾರ್ಯ ಒತ್ತಡಗಳ‌ ಮಧ್ಯೆಯೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜೂನ್ 1ರಂದು, ವಿಶೇಷ ಚೇತನ ಮಕ್ಕಳಿರುವ ಸಂಸ್ಥೆಯೊಂದಕ್ಕೆ ಭೇಟಿ ನೀಡಿ, ವಿಶೇಷ ಚೇತನ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದರು.

ವಿಶೇಷ ಚೇತನ ಮಕ್ಕಳೊಂದಿಗೆ ಸಿಇಓ ಕೇಕ್ ಕಟ್: ವಿಜಯಪುರ ನಗರದಲ್ಲಿರುವ ವಿಕಲ ಚೇತನರ ಪುನಶ್ಚೇತನ ಕೇಂದ್ರವಾದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗೆ ಭೇಟಿ ನೀಡಿದ ಸಿಇಓ ಅವರು, ವಿಕಲ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕೇಂದ್ರದ 2022-23ನೇ ಸಾಲಿನ ಸಂಸ್ಥೆಯ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

Vijayapura: ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಗುಮ್ಮಟನಗರಿ ಯುವತಿ!

ಮಕ್ಕಳಲ್ಲಿನ ಬದಲಾವಣೆ ಕಂಡು ಹರ್ಷಗೊಂದ ಸಿಇಓ: ಸಂಸ್ಥೆಯು ವಿಶೇಷ ಚೇತನ ಮಕ್ಕಳಿಗೆ ಒದಗಿಸುತ್ತಿರುವ ವಿಶೇಷ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿದು, ಆ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಂಡು ಸಿಇಓ ಅವರು ಹರ್ಷ ವ್ಯಕ್ತಪಡಿಸಿದರು. ವಿಕಲ ಚೇತನ ಮಕ್ಕಳು ಪ್ರಸಕ್ತ ಸಾಲಿನ ಶಿಕ್ಷಣವನ್ನು ಸಹ ಅತ್ಯಂತ ಉತ್ಸಾಹದಿಂದ ಕಲಿಯಲು ಪ್ರೋತ್ಸಾಹಿಸಿ, ಅವರಿಗೆ ಶುಭಾಶಯಗಳನ್ನು ತಿಳಿಸಿದರು. 

ವಿಜಯಪುರ ಜಿಲ್ಲೆಗೆ ಉತ್ತಮ ಅವಕಾಶ: ಈ ವೇಳೆ ಮಾತನಾಡಿದ ಸಿಇಓ ಅವರು, ವಿಕಲ ಚೇತನರ ಪುನಶ್ಚೇತನ ಕೇಂದ್ರವೊಂದು ವಿಜಯಪುರದಲ್ಲಿರುವುದು ಒಂದು ಉತ್ತಮ ಅವಕಾಶ, ವಿಕಲಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಇದನ್ನು ಉಪಯೋಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಸಂಸ್ಥೆಯಲ್ಲಿರುವ ಮಕ್ಕಳಿಗೆ ನಿಯಮಾನುಸಾರ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಬಡಿಗೆಗಳಿಂದ ಹೊಡೆದಾಡುವ ವಿಚಿತ್ರ ಜಾತ್ರೆ,ರಕ್ತ ನೆಲಕ್ಕೆ ಬೀಳುವವರೆಗೂ ನಡೆಯುತ್ತೆ ಹೊಡೆದಾಟ..!

ಸಿಬ್ಬಂದಿಗೆ ಸಲಹೆ ಜಿ.ಪಂ ಸಿಇಓ: ಸಂಸ್ಥೆಯಲ್ಲಿ ಪ್ರತಿನಿತ್ಯ ಮಕ್ಕಳಿಗೆ ದೈಹಿಕ ವ್ಯಾಯಾಮ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಸಂಸ್ಥೆಯ ಸಿಬ್ಬಂದಿಯವರಿಗೆ ಇದೆ ವೇಳೆ ಸಿಇಓ ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪ್ರಶಾಂತ ಎಸ್. ದೇಶಪಾಂಡೆ, ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಅಜಿತ್ ಕುಲಕರ್ಣಿ, ಸಂಸ್ಥೆಯ ಮುಖ್ಯ ಗುರುಗಳಾದ ಕವಿತಾ ಗದ್ವಾಲ, ಸಂಸ್ಥೆಯ ದೈಹಿಕ ಶಿಕ್ಷರರಾದ ಅಶ್ವಿನಿ ಬುರಾಣಪುರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Follow Us:
Download App:
  • android
  • ios