Asianet Suvarna News Asianet Suvarna News

ಬಡಿಗೆಗಳಿಂದ ಹೊಡೆದಾಡುವ ವಿಚಿತ್ರ ಜಾತ್ರೆ,ರಕ್ತ ನೆಲಕ್ಕೆ ಬೀಳುವವರೆಗೂ ನಡೆಯುತ್ತೆ ಹೊಡೆದಾಟ..!

* ಗುಮ್ಮಟನಗರಿಯಲ್ಲಿ ಬಡಿಗೆಗಳಿಂದ ಹೊಡೆದಾಡುವ ವಿಚಿತ್ರ ಜಾತ್ರೆ..!
* ರಕ್ತ ನೆಲಕ್ಕೆ ಬೀಳುವವರೆಗು ನಡೆಯುತ್ತೆ ಹೊಡೆದಾಟ..!
* ಕನ್ನೂರಿನಲ್ಲಿ 300 ವರ್ಷಗಳಿಂದ ನಡೆದು ಬಂದ ಸಂಪ್ರದಾಯ..!

Peoples Fighting Special fair celebrated in Vijayapura rbj
Author
Bengaluru, First Published May 28, 2022, 9:44 PM IST

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮೇ.28) : ಗ್ರಾಮೀಣ ಪ್ರದೇಶಗಳಲ್ಲಿ ನಾನಾ ತರಹದಲ್ಲಿ ಜಾತ್ರೆಗಳು ನಡೆಯುತ್ವೆ. ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ನಡೆಯೋ ಜಾತ್ರೆಯ ವಿಶೇಷವೇ ಬೇರೆ. ಬಡಿಗೆಗಳಿಂದ ಹೊಡೆದಾಡುವ ಮೂಲಕ ವಿಚಿತ್ರ ರೀತಿಯಲ್ಲಿ ಜಾತ್ರೆ ಆಚರಣೆ ನಡೆಯುತ್ತೆ. ಬಾದಾಮಿ ಅಮವಾಸ್ಯೆಗು ಮುನ್ನ ಕನ್ನೂರು ಗ್ರಾಮದಲ್ಲಿ ಬಡಿಗೆಗಳಿಂದ ಹೊಡೆದಾಡುವ ಮೂಲಕ ಜಾತ್ರೆ ಆಚರಿಸೋ ಸಂಪ್ರದಾಯವಿದೆ. ಗ್ರಾಮದ ರೇವಣಸಿದ್ದೇಶ್ವರ ಜಾತ್ರೆ ಅಂಗವಾಗಿ ಗ್ರಾಮದಲ್ಲಿ ದೇವರ ಮುಖವಾಡ ತೊಟ್ಟ ವ್ಯಕ್ತಿ ಹಾಗೂ ಅನ್ಯಕೋಮಿನ ಜನರ ನಡುವೆ ಬಡಿಗೆಗಳಿಂದ ಹೊಡೆದಾಟ ನಡೆಯುತ್ತೆ.

300 ವರ್ಷಗಳ ಇತಿಹಾಸದ ಬಡಿಗೆ ಜಾತ್ರೆ..!
ಈ ಬಡಿಗೆ ಜಾತ್ರೆ ಕಳೆದ 300 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೊಂಡು ಹಿನ್ನೆಲೆಯೂ ಕೂಡಾ ಇದೆ. ಬದಾಮಿ ಅಮವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರರ ನಡುವಿನ ದ್ಷೇಷದ ಹಿನ್ನೆಲೆಯನ್ನು  ಹೊಂದಿದೆ. ಜಾತ್ರೆಯ ನಿಮಿತ್ಯ ರೇವಣಸಿದ್ದ ದೇವರು ಹಾಗೂ ಅನ್ಯ ಕೋಮಿನ ಯುವಕರ ನಡುವೆ ಬಡಿಗೆಗಳಿಂದ ಹೊಡೆದಾಡುವ ಸಂಪ್ರಯವಿದೆ. ಇದಕ್ಕೆ ಮೂರು ದಶಕಗಳ ಐತಿಹ್ಯ ಇದೆ ಅನ್ನೋದೆ ವಿಶೇಷ..!

Festival Activities: ಜಾತ್ರೆ ಬಂದ್ರೆ ಬಂದ್ ಆಗೋ ಊರು ಇದು, ಊರಿಗ ಸುತ್ತ ಮುಳ್ಳಿನ ಬೇಲಿ

ಜಾತ್ರೆ ಆಚರಣೆ ಹಿಂದೆ ಒಂದು ಹತ್ಯೆಯ ಕಥೆ..!
Peoples Fighting Special fair celebrated in Vijayapura rbj

ಕನ್ನೂರು ಗ್ರಾಮದ  ನಂದಗೊಂಡಗೌಡ  ಎಂಬುವವರು ಮಕ್ಕಳಾಗಲಿಲ್ಲಾ ಎಂಬ ಕಾರಣಕ್ಕೆ 2ನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ನಂತರ ಮೊದಲನೇಯ ಹೆಂಡತಿಗೆ   ರೇವಣಸಿದ್ದ  ಎಂಬ ಮಗುವಿನ ಜನನವಾಗುತ್ತದೆ. ಹಾಗೂ ಎರಡನೇಯ ಹೆಂಡತಿಗೆ 7 ಗಂಡು ಮಕ್ಕಳು ಜನ್ಮ ತಾಳುತ್ತಾರೆ. ಮೊದಲ ಹೆಂಡತಿ ಪದ್ಮಾವತಿ ಬೀಸುವಾಗ ಹಾಡುತ್ತಾ ತನ್ನ ಮಗನಿಗೆ 7 ಬಂಡಿ ಬಂಗಾರದ  ಐಶ್ವರ್ಯ ಸಿಗಲಿ ಎಂದು ಹಾಡುತ್ತಾ ಪ್ರಾರ್ಥನೆ ಮಾಡುತ್ತಾಳೆ. ಇದನ್ನು ಕೇಳಿದ 2  ನೇ ಹೆಂಡತಿ ಲಕ್ಕವ್ವಾ ತನ್ನ ಮಕ್ಕಳಿಗೆ ಐಶ್ವರ್ಯ ಸಿಗಲಾರದು ಎಂದು ತಿಳಿದು ತನ್ನ ಸವತಿಯ ಮಗನನ್ನು ಕೊಲೆ ಮಾಡಲು ಅನ್ಯ ಕೋಮಿನ ಜನರಿಗೆ ಹೇಳುತ್ತಾಳೆ. 

ನಂತರ ಅನ್ಯಕೋಮಿನ ಜನ ಮೊದಲ ಹೆಂಡತಿಯ ಮಗನನ್ನು ಕೊಲೆ ಮಾಡುತ್ತಾರೆ. ಮಗಾ ಕೊಲೆಯಾಗಿದ್ದನ್ನು ಕನಸಿನಲ್ಲಿಯೇ ಕಂಡ ಪದ್ಮಾವತಿ ದುಖಃತಪ್ತಳಾಗುತ್ತಾಳೆ.  ನಂತರ ಗ್ರಾಮದಲ್ಲಿ ಕಾಡಾಟಗಳು ಪ್ರಾರಂಭವಾಗುತ್ತವೆ.  ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಮಾಡಿದ್ರೆ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ   ಎಂದು ತಿಳಿದು ಬರುತ್ತದೆ. ಈ ಕಾರಣದಿಂದ ಗ್ರಾಮದಲ್ಲಿ ವರ್ಷಂ ಪ್ರತಿ ರೇವಣಸಿದ್ದನ ಜಾತ್ರೆಯನ್ನು ಆಚರಣೆ  ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಂದು ರೇವಣಸಿದ್ದನನ್ನು ಕೊಲೆ ಮಾಡಿರುವ ಅನ್ಯಕೋಮಿನ ಜನರು ಬಡಿಗೆಗಳನ್ನು ಹಿಡಿದುಕೊಂಡು ಬಂದು ರೇವಣಸಿದ್ದನನ್ನು ಕೆಣಕುತ್ತಾರೆ. ರೇವಣಸಿದ್ದ ದೇವರ ವೇಷಧಾರಿ ಎಲ್ಲರನ್ನು ಅಟ್ಟಾಡಿಸಿಕೊಂಡು ಬಡಿಗೆಯಿಂದ ಹೊಡೆಯುತ್ತಾ ಹಿಮ್ಮೆಟಿಟ್ಟಿಸುತ್ತಾ ಸಾಗುತ್ತಾನೆ.

ರಕ್ತ ನೆಲಕ್ಕೆ ಬೀಳುವವರೆಗು ನಡೆಯುತ್ತೆ ಹೊಡೆದಾಟ..!
Peoples Fighting Special fair celebrated in Vijayapura rbj

ಈ  ರೀತಿಯಾಗಿ ಬಡಿಗೆಗಳಿಂದ ಪರಸ್ಪರ ಹೊಡೆದಾಡುತ್ತಾ,  ಸಾಗುವಾಗ ರೇವಣಸಿದ್ದನ ಹೊಡೆತದಿಂದ ಅನ್ಯಕೋಮಿನವರ ರಕ್ತ ತರ್ಪಣವಾಗಬೇಕೆಂಬ ಸಂಪ್ರದಾಯವೂ ಇದೆ. ಹೀಗೆ ಬಡಿಗೆಗಳಿಂದ ಹೊಡೆದಾಡುತ್ತಾ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಕಾದಾಟ ನಡೆಯುತ್ತದೆ. ಆಗ ಬಡಿಗೆಯಿಂದ ಹೊಡೆದ ರಕ್ತ ನೆಲಕ್ಕೆ ಬಿದ್ದರೇ ಜಾತ್ರೆ ಮುಗಿಯಿತು ಎಂಬ ನಂಬಿಕೆ ಇದೆ.

ಭಂಡಾರದಲ್ಲಿ ಮಿಂದೆಳುವ ಭಕ್ತರು..!
ಬಡಿಗೆಗಳಿಂದ ಹೊಡೆದಾಡುವಾಗ ಭಂಡಾರವನ್ನು ತೂರಲಾಗುತ್ತದೆ. ಪರಸ್ಪರರು ಭಂಡಾರದಲ್ಲಿ ಮಿಂದೇಳುತ್ತಾರೆ. ನಂತರ  ಮದ್ಯಾಹ್ನ ಮೂರು ಗಂಟೆಯ ಸುಮಾರಿಗೆ ಎಲ್ಲರೂ ಗ್ರಾಮದ ಹಳ್ಳದ ಹತ್ತಿರ ಹೋಗುತ್ತಾರೆ. ಅಲ್ಲಿ  ರೇವಣಸಿದ್ದನಿಗೆ ಜೋಳದ ಗುಗ್ಗರಿ ಹಾಗೂ ಇನ್ನಿತರ  ಪದಾರ್ಥಗಳನ್ನು ನೈವೇಧ್ಯ ಮಾಡಲಾಗುತ್ತದೆ. ಅಲ್ಲಿಗೇ ಜಾತ್ರೆಯು ಮುಕ್ತಾಯವಾಗುತ್ತದೆ. ಗಾಯವಾದವರ ಮೇಲೆ ಬಂಡಾರ ಬಿದ್ದರೆ ಅಂತವರ ಗಾಯಗಳು ಮಾಯವಾಗುತ್ವೆ ಅನ್ನೋ ನಂಬಿಕೆಯು ಭಕ್ತರದಲ್ಲಿದೆ. ಇದೆಲ್ಲವು ರೇವಣಸಿದ್ದ ಸ್ವಾಮೀಯ ಪವಾಡ ಎನ್ನಲಾಗುತ್ತೆ..!

ನೆರೆಯ ಮಹಾರಾಷ್ಟ್ರದಿಂದಲು ಜಾತ್ರೆ ನೋಡಲು ಬರುವ ಜನ..!
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ  ನಡೆಯುವ ರೇವಣಸಿದ್ದ ಜಾತ್ರೆಯು ಅತ್ಯಂತ  ವಿಶೇಷವಾಗಿದೆ. ಈ ಜಾತ್ರೆಯ ವೀಕ್ಷಣೆಗೆ ನೆರೆಯ ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶಗಳಿಂದಲೂ ಜನರು ಬರುತ್ತಾರೆ. ಕನ್ನೂರಿನ ಹೆಣ್ಣು ಮಕ್ಕಳು  ಜಾತ್ರೆಯ ಪ್ರಯುಕ್ತ ತವರಿಗೆ ಆಗಮಿಸುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದಾಯಾದಿ ಮತ್ಸರ, ಆಸ್ತಿಯಾಸೆ ಒಳ್ಳೆಯದಲ್ಲಾ ಎಂಬುದಕ್ಕೆ ರೇವಣಸಿದ್ದ ಸ್ವಾಮಿಯ ಜಾತ್ರೆಯೇ ಸಾಕ್ಷಿಯಾಗಿದೆ ಎಂದು ಹೇಳಬಹುದು.

Follow Us:
Download App:
  • android
  • ios