ಪಟ್ಟಣದ ಬ್ರಾಹ್ಮಣ ಸಮಾಜದ ಯುವ ಮುಖಂಡ ವಿಜಯರಾವ ಹೇರೂರು (51) ಭಾನುವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾದರು.
ಗಂಗಾವತಿ (ಮೇ.12): ಪಟ್ಟಣದ ಬ್ರಾಹ್ಮಣ ಸಮಾಜದ ಯುವ ಮುಖಂಡ ವಿಜಯರಾವ್ ಹೇರೂರು (51) ಭಾನುವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇತ್ತೀಚೆಗೆ ಬಿಡುಗಡೆಯಾದ 'ವಿಜಯದಾಸರು' ಚಿತ್ರದಲ್ಲಿ ಸಹ ನಟರಾಗಿ ನಟಿಸಿದ್ದ ವಿಜಯರಾವ್, ಅವರು ದಾಸ ಸಾಹಿತ್ಯದಲ್ಲಿಯು ಕೃಷಿ ಮಾಡಿದ್ದರು. ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದ್ದರು, ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದರು. ಆದರೆ ವಿಧಿಯಾಟದಿಂದ ಹೃದಯಘಾತಕ್ಕೆ ಒಳಗಾದರು. ತಾಯಿ, ಸಹೋದರ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬ್ರಾಹ್ಮಣ ಸಮಾಜ ತೀವ್ರ ಸಂತಾಪ ವ್ಯಕ್ತಪಡಿಸಿದೆ.
