ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಂಗಳೂರಿಗೆ ನಾಳೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಾಹನ ಸವಾರರಿಗೆ ಟ್ರಾಫಿಕ್‌ ಬಿಸಿ ತಟ್ಟಲಿದೆ. ಸಂಚಾರಿ ಪೊಲೀಸರು ಹೆಚ್ಚಾಗಿ ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಮಾ.02): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಂಗಳೂರಿಗೆ ನಾಳೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಾಹನ ಸವಾರರಿಗೆ ಟ್ರಾಫಿಕ್‌ ಬಿಸಿ ತಟ್ಟಲಿದೆ. ಸಂಚಾರಿ ಪೊಲೀಸರು ಹೆಚ್ಚಾಗಿ ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಳೆ ಬೆಂಗಳೂರು ವಾಹನ ಸವಾರರಿಗೆ ಟ್ರಾಫಿಕ್‌ ಬಿಸಿ ತಟ್ಟೋದಂತೂ ಖಚಿತವಾಗಿದೆ. ಮಾ.3ರ ಮಧ್ಯಾಹ್ನದಿಂದ ರಾತ್ರಿ 9 ಗಂಟೆವರೆಗೆ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರಿಂದ ಬೆಂಗಳೂರು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಪರ್ಯಾಯ ಮಾರ್ಗ ಬಳಸಬೇಕು ಅನ್ನೋದನ್ನ ನೋಡೋದಾದರೆ. ನಾಳೆ ವಾಹನ ಸವಾರರಿಗೆ ಈ ರಸ್ತೆಗಳಲ್ಲಿ ಎರಡು ಬದಿಯಲ್ಲಿ ಎಲ್ಲೂ ಪಾರ್ಕಿಂಗ್ ವ್ಯವಸ್ಥೆ ಇರೋದಿಲ್ಲ. ಜೊತೆಗೆ ಈ ಮಾರ್ಗಗಳನ್ನು ಬಳಸದೇ ಇದ್ದರೆ ಸೂಕ್ತ ಎಂದು ಎಚ್ಚರಿಸಿದ್ದಾರೆ.

ಮೋದಿ, ಶಾ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಉದ್ಘಾಟನೆ: ಸಿಎಂ ಬೊಮ್ಮಾಯಿ

ಈ ರಸ್ತೆಗಳಲ್ಲಿ ವಾಹನ ಸಂಚಾರ ಬೇಡ:

  • ದೇವನಹಳ್ಳಿ ಮುಖ್ಯ ರಸ್ತೆ
  • ಬಳ್ಳಾರಿ ರಸ್ತೆ
  • ಹೆಬ್ಬಾಳ ಜಂಕ್ಷನ್‌ 
  • ಮೇಖ್ರಿ ವೃತ್ತ
  • ಕಾವೇರಿ ಥಿಯೇಟರ್‌ ಜಂಕ್ಷನ್
  • ರಮಣ ಮಹರ್ಷಿ ರಸ್ತೆ
  • ರಾಜಭವನ ರಸ್ತೆ
  • ಇನ್‌ಫ್ಯಾಂಟ್ರಿ ರಸ್ತೆ
  • ಕಬ್ಬನ್‌ ರಸ್ತೆ
  • ನೃಪತುಂಗ ರಸ್ತೆ
  • ಕ್ವೀನ್ಸ್‌ ರೋಡ್
  • ವಿಧಾನಸೌಧ ಮುಂಭಾಗದ ಅಂಬೇಡ್ಕರ್ ವೀದಿ ರಸ್ತೆ
  • ಕೆ.ಆರ್. ವೃತ್ತ
  • ಪೊಲೀಸ್‌ ಕಾರ್ನರ್
  • ಹಡ್ಸನ್‌ ವೃತ್ತ (ಕಾರ್ಪೋರೇಷನ್ ಸರ್ಕಲ್) 
  • ಎನ್‌.ಆರ್. ಜಂಕ್ಷನ್
  • ಟೌನ್‌ಹಾಲ್‌ ಜಂಕ್ಷನ್
  • ಗೋಪಾಲಗೌಡ ಜಂಕ್ಷನ್‌
  • ಪೊಲೀಸ್‌ ತಿಮ್ಮಯ್ಯ ರಸ್ತೆ
  • ಟ್ರಿನಿಟಿ ಜಂಕ್ಷನ್ 
  • ಹಳೆ ವಿಮಾನ ನಿಲ್ದಾಣ ರಸ್ತೆ
  • ಎಎಸ್‌ಸಿ ಸೆಂಟರ್
  • ಇಸ್ರೋ ಜಂಕ್ಷನ್‌
  • ಎಸ್‌ಡಿ ರಸ್ತೆ

ಬದಲಿ ಮಾರ್ಗದಲ್ಲಿ ಹೋಗಲು ಸೂಚನೆ: ಈ ಮೇಲೆ ತಿಳಿಸಲಾದ ರಸ್ತೆಗಳಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಯಾವ ವಧಿಯಲ್ಲಿ ಬೇಕಾದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಾವರು ಹಾದು ಹೋಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟ್ರಾಫಿಕ್‌ ರಹಿತ ಸಂಚಾರ ವ್ಯವಸ್ಥೆ ನೀಡಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ರಸ್ತೆಗಳಲ್ಲಿ ನಾಳೆ ಮಧ್ಯಾಹ್ನದಿಂದ ರಾತ್ರಿವರೆಗೆ ಸಂಚಾರವನ್ನು ತಪ್ಪಿಸಿ, ಬದಲಿ ಮಾರ್ಗಗಳಲ್ಲಿ ಹೋಗಬೇಕು ಎಂದು ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

ಮಾ.3ಕ್ಕೆ ದೇವನಹಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸಚಿವ ಸುಧಾಕರ್‌

ದೇವನಹಳ್ಳಿಯ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ದೇವನಹಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ದೇವನಹಳ್ಳಿಯಲ್ಲಿ ನಡೆಯಲಿರುವ ಯಾತ್ರೆಗೆ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆ. ಗೃಹ ಸಚಿವರು ಪಾಲ್ಗೊಳ್ಳುವ ವಿಜಯ ಸಂಕಲ್ಪ ಯಾತ್ರೆಗೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಕೋಲಾರ, ರಾಮನಗರ ಮತ್ತು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಾಗಲಿದ್ದಾರೆ. ಈ ವೇಳೆ ಬೆಂಗಳೂರಿನ ಈ ಮೇಲೆ ಗುರುತಿಸಲಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿರಲಿದೆ.