Asianet Suvarna News Asianet Suvarna News

ರಾಮ​ನ​ಗರ: ಮಳ​ವಳ್ಳಿ ಶಾಸ​ಕ​ರೊಂದಿಗೆ ಟೋಲ್‌ ಸಿಬ್ಬಂದಿ ಅನು​ಚಿತ ವರ್ತನೆ

ಮಂಡ್ಯ ಜಿಲ್ಲೆಯ ಮಳ​ವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.​ನ​ರೇಂದ್ರ ಸ್ವಾಮಿ ಅವ​ರೊಂದಿಗೆ ಕಿರಿಕ್‌

Toll Staff Misbehaved with Malavalli MLA PM Narendraswamy in Ramanagara grg
Author
First Published Jun 7, 2023, 3:30 AM IST

ರಾಮ​ನ​ಗರ(ಜೂ.07): ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾ​ರಿಯ ಕಣ​ಮಿ​ಣಿಕೆ ಟೋಲ್‌ ಪ್ಲಾಜಾ​ದಲ್ಲಿ ಶಾಸ​ಕ​ರೊಂದಿಗೆ ಟೋಲ್‌ ಸಿಬ್ಬಂದಿ ಅನು​ಚಿ​ತ​ವಾಗಿ ವರ್ತಿ​ಸಿ​ರುವ ಘಟನೆ ತಡ​ವಾಗಿ ಬೆಳ​ಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಮಳ​ವಳ್ಳಿ ಕ್ಷೇತ್ರ ಶಾಸಕ ಪಿ.ಎಂ.​ನ​ರೇಂದ್ರ ಸ್ವಾಮಿ ಅವ​ರೊಂದಿಗೆ ಟೋಲ್‌ ಸಿಬ್ಬಂದಿ ಕಿರಿಕ್‌ ಮಾಡಿ​ದ್ದ​ಲ್ಲದೆ ಗೂಂಡಾ ವರ್ತನೆ ತೋರಿ​ದ್ದಾರೆ. ಈ ಘಟ​ನೆಯ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ.
ಕಳೆದ ಭಾನು​ವಾರ ಬೆಂಗ​ಳೂ​ರಿ​ನಿಂದ ಮಳ​ವಳ್ಳಿ ಕಡೆ ಪ್ರಯಾ​ಣಿ​ಸು​ತ್ತಿದ್ದ ಶಾಸಕ ಪಿ.ಎಂ.ನ​ರೇಂದ್ರಸ್ವಾಮಿ ಅವ​ರಿದ್ದ ಕಾರಿಗೆ ಪಾಸ್‌ ಇದ್ದರೂ ಕುಂಬ​ಳ​ಗೂಡು ಬಳಿಯ ಕಣ​ಮಿ​ಣಿಕೆ ಟೋಲ್‌ ಪ್ಲಾಜಾ​ದಲ್ಲಿ ಸಿಬ್ಬಂದಿ ತಡೆ​ದು ನಿಲ್ಲಿ​ಸಿ​ದ್ದಾರೆ. ಈ ವೇಳೆ ಶಾಸ​ಕರು ಮತ್ತು ಸಿಬ್ಬಂದಿ ನಡುವೆ ಕೆಲ​ಕಾಲ ವಾಗ್ವಾದ ನಡೆ​ದಿದೆ. ಪೊಲೀ​ಸರು ಬರಲಿ ಎಂದು ನರೇಂದ್ರ ಸ್ವಾಮಿ ಹೇಳಿ​ದ್ದಾರೆ. ಆಗ ಸಿಬ್ಬಂದಿ ಯಾವ ಪೊಲೀ​ಸರು ಬೇಕಾ​ದರು ಬರಲಿ, ನಾನು ನೋಡಿ​ರದ ಪೊಲೀಸಾ ಎಂದು ಏಕ​ವ​ಚ​ನ​ದ​ಲ್ಲಿಯೇ ಮಾತ​ನಾ​ಡಿ​ದ್ದಾರೆ.

RAMANAGARA: ಕಾಡಂಚಿನ ಗ್ರಾಮ​ಗ​ಳಲ್ಲಿ ಕಲ್ಲಿನ ತಡೆ​ಗೋಡೆಗೆ ಚಿಂತನೆ: ಸಚಿವ ಈಶ್ವರ ಖಂಡ್ರೆ

ಅಲ್ಲದೆ, ನೀವು ಸರ್ಕಾ​ರದ ಪ್ರತಿ​ನಿಧಿ, ಕರೆ​ಕ್ಟಾಗಿ ಮಾತ​ನಾ​ಡ​ಬೇ​ಕು. ನಿಮ್ಮನ್ನು ಹೈವೆ​ಯಲ್ಲಿ ಫ್ರೀಯಾಗಿ ಬಿಡು​ತ್ತಿ​ದ್ದೇವೆ ಎಂದು ಸಿಬ್ಬಂದಿ ಹೇಳಿ​ದ್ದ​ರಿಂದ ಶಾಸ​ಕರು ಮತ್ತಷ್ಟುಕೋಪ​ಗೊಂಡು ತರಾಟೆ ತೆಗೆ​ದು​ಕೊಂಡಿ​ದ್ದಾರೆ.
ಸಿಬ್ಬಂದಿ ನಾನು ಜೆಡಿ​ಎಸ್‌ ಕಾರ್ಯ​ದರ್ಶಿ, ಇಲ್ಲಿ ಮ್ಯಾನೇ​ಜರ್‌ ಆಗಿ ಕೆಲಸ ಮಾಡು​ತ್ತಿ​ದ್ದೇನೆ ಎಂದಾಗ ನರೇಂದ​ಸ್ವಾ​ಮಿ​ರ​ವರು ನೀನು ಜೆಡಿ​ಎಸ್‌ ಕಾರ್ಯ​ದ​ರ್ಶಿ​ಯಾ​ದರೆ ನಾನೇನು ಮಾಡಲಿ. ನನ್ನ ಕಾರನ್ನು ಏಕೆ ತಡೆದು ನಿಲ್ಲಿ​ಸಿ​ದ್ದೀಯಾ ಎಂದು ಹರಿ​ಹಾ​ಯ್ದರು.

ಕಣಮಿಣಿಕೆ ಟೋಲ್‌ ಪ್ಲಾಜಾ​ದಲ್ಲಿ ಅನು​ಚಿ​ತ​ವಾಗಿ ವರ್ತಿ​ಸಿದ ಸಿಬ್ಬಂದಿ ವಿರುದ್ಧ ಪೊಲೀ​ಸ​ರಿಗೆ ಮೌಖಿಕ​ವಾಗಿ ತಿಳಿ​ಸಿದ್ದೆ. ಆ ಸಿಬ್ಬಂದಿ ವಿರುದ್ಧ ಕ್ರಮ​ಕೈ​ಗೊ​ಳ್ಳ​ವಂತೆ ಬರ​ವ​ಣಿ​ಗೆ​ಯಲ್ಲಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸುತ್ತೇನೆ ಅಂತ ಮಳ​ವಳ್ಳಿ ಕ್ಷೇತ್ರ ಶಾಸ​ಕ ಪಿ.ಎಂ.ನ​ರೇಂದ್ರ ಸ್ವಾಮಿ ತಿಳಿಸಿದ್ದಾರೆ. 

Follow Us:
Download App:
  • android
  • ios