Asianet Suvarna News Asianet Suvarna News

Ramanagara: ಕಾಡಂಚಿನ ಗ್ರಾಮ​ಗ​ಳಲ್ಲಿ ಕಲ್ಲಿನ ತಡೆ​ಗೋಡೆಗೆ ಚಿಂತನೆ: ಸಚಿವ ಈಶ್ವರ ಖಂಡ್ರೆ

ಕಾಡಂಚಿ​ನಲ್ಲಿ ಕಾಡಾನೆ ಸೇರಿ​ದಂತೆ ವನ್ಯ​ಜೀ​ವಿ​ಗ​ಳ ಹಾವಳಿ ನಿಯಂತ್ರಿ​ಸಲು ನರೇಗಾ ಯೋಜನೆ ಅಡಿ​ ದಪ್ಪ ಕಲ್ಲಿನ ತಡೆ​ಗೋಡೆ ನಿರ್ಮಿ​ಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪಂಚಾ​ಯತ್‌ ರಾಜ್‌ ಇಲಾಖೆ ಅಧಿ​ಕಾ​ರಿ​ಗ​ಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊ​ಳ್ಳ​ಲಾ​ಗು​ವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿ​ಸಿ​ದರು. 

Contemplation of stone barrier in jungle villages Says Minister Eshwar Khandre gvd
Author
First Published Jun 5, 2023, 8:43 PM IST

ರಾಮ​ನಗರ (ಜೂ.05): ಕಾಡಂಚಿ​ನಲ್ಲಿ ಕಾಡಾನೆ ಸೇರಿ​ದಂತೆ ವನ್ಯ​ಜೀ​ವಿ​ಗ​ಳ ಹಾವಳಿ ನಿಯಂತ್ರಿ​ಸಲು ನರೇಗಾ ಯೋಜನೆ ಅಡಿ​ ದಪ್ಪ ಕಲ್ಲಿನ ತಡೆ​ಗೋಡೆ ನಿರ್ಮಿ​ಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪಂಚಾ​ಯತ್‌ ರಾಜ್‌ ಇಲಾಖೆ ಅಧಿ​ಕಾ​ರಿ​ಗ​ಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊ​ಳ್ಳ​ಲಾ​ಗು​ವುದು ಎಂದು ಅರಣ್ಯ ಜೀವ​ಶಾಸ್ತ್ರ ಮತ್ತು ಪರಿ​ಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿ​ಸಿ​ದರು. ನಗ​ರದ ಅರಣ್ಯ ಭವ​ನ​ದಲ್ಲಿ ಸುದ್ದಿ​ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಂಚಿನ ಗ್ರಾಮ​ಗ​ಳಲ್ಲಿ ಕಾಡಾ​ನೆ​ಗಳ ಹಾವಳಿ ತಡೆ​ಯಲು ರೈಲ್ವೆ ಬ್ಯಾರಿ​ಕೇಡ್‌ ಹಾಗೂ ವನ್ಯ​ಜೀ​ವಿ​ಗಳ ನಿಯಂತ್ರ​ಣಕ್ಕೆ ಸೋಲಾರ್‌ ಫೆನ್ಸಿಂಗ್‌ ನಿರ್ಮಾಣ ಮಾಡ​ಲಾ​ಗು​ತ್ತಿದೆ. 

ಇದೀಗ ಸಂಸದ ಸುರೇಶ್‌ ಅವರು ನರೇ​ಗಾ ಯೋಜ​ನೆ​ಯಡಿ ಕಾಂಪೌಂಡ್‌ ನಿರ್ಮಾ​ಣದ ಉತ್ತಮ ಸಲ​ಹೆ ನೀಡಿದ್ದಾರೆ. ರೈಲ್ವೆ ಬ್ಯಾರಿ​ಕೇಡ್‌ ಮತ್ತು ಕಲ್ಲಿನ ತಡೆ​ಗೋ​ಡೆ​ಗಳ ತುಲ​ನಾ​ತ್ಮಕ ವರದಿ ಪಡೆದು ಅರಣ್ಯ ಇಲಾಖೆ ಹಾಗೂ ಪಂಚಾ​ಯತ್‌ ರಾಜ್‌ ಇಲಾಖೆ ಅಧಿ​ಕಾ​ರಿ​ಗಳ ಜೊತೆ ಚರ್ಚಿಸಿ ಜಾರಿಗೆ ತರುವ ಪ್ರಯತ್ನ ಮಾಡು​ತ್ತೇನೆ ಎಂದು ಹೇಳಿದ​ರು. ರಾಜ್ಯ​ದಲ್ಲಿ ಸುಮಾರು 641 ಕಿ.ಮೀ. ಉದ್ದದ ರೈಲ್ವೆ ಬ್ಯಾರಿ​ಕೇಡ್‌ ತಡೆ​ಗೋಡೆ ನಿರ್ಮಾ​ಣದ ಪ್ರಸ್ತಾ​ವನೆ ಇದೆ. ಈಗಾ​ಗಲೇ 310 ಕಿ.ಮೀ. ಬ್ಯಾರಿ​ಕೇಡ್‌ ನಿರ್ಮಾಣ ಮಾಡ​ಲಾ​ಗಿದ್ದು, ರಾಮ​ನ​ಗ​ರ ಜಿಲ್ಲೆ​ಯಲ್ಲಿ 73 ಕಿ.ಮೀ. ಸೇರಿ​ದಂತೆ ಒಟ್ಟು 331 ಕಿ.ಮೀ. ಬ್ಯಾರಿ​ಕೇಡ್‌ ನಿರ್ಮಿ​ಸು​ವುದು ಬಾಕಿ ಇದೆ. 

ರಾಮ​ನಗರ, ಬನ್ನೇ​ರು​ಘ​ಟ್ಟ​ದಲ್ಲಿ ಆನೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ

ಪ್ರತಿ ಒಂದು ಕಿ.ಮೀ ಬ್ಯಾರಿ​ಕೇಡ್‌ ನಿರ್ಮಾ​ಣಕ್ಕೆ 1.50 ಕೋಟಿ ಖರ್ಚು ತಗ​ಲು​ತ್ತಿದ್ದು, ಒಟ್ಟಾರೆ 500 ಕೋಟಿ ರುಪಾಯಿ ಅವ​ಶ್ಯ​ಕತೆ ಇದೆ ಎಂದು ಹೇಳಿ​ದ​ರು. ಇದ​ಲ್ಲದೆ ಸಣ್ಣ ಸಣ್ಣ ಅರ​ಣ್ಯ ಕ್ಷೇತ್ರ​ಗ​ಳಲ್ಲಿ ಸೋಲಾರ್‌ ಫೆನ್ಸಿಂಗ್‌ ಅಳ​ವ​ಡಿ​ಸು​ವಂತೆ ತಜ್ಞ​ರಿಂದ ಸಲ​ಹೆ​ಗಳು ಬಂದಿವೆ. ಇನ್ನೂ 100 ಕಿ.ಮೀ ಸೋಲಾರ್‌ ಫೆನ್ಸಿಂಗ್‌ ಅಳ​ವ​ಡಿ​ಸುವ ಕಾಮ​ಗಾರಿ ಬಾಕಿ​ಯಿದೆ. ಇನ್ನು ಸೋಲಾರ್‌ ನಿರ್ವ​ಹಣೆ ಜವಾ​ಬ್ದಾರಿ ಅರಣ್ಯ ಇಲಾ​ಖೆ​ಯ ಹೆಗಲ ಮೇಲಿದೆ. ಸಾಮಾನ್ಯವಾಗಿ ಆನೆಗಳು ಹಲಸಿನ ಹಣ್ಣು, ಕಬ್ಬು, ಕಾಫಿ ಬೀಜ ತಿನ್ನುವ ಸಲುವಾಗಿ ನಾಡಿಗೆ ಬರುತ್ತವೆ. ಇದನ್ನು ತಡೆಯಲು ಸೌರ ತಂತಿ ಬೇಲಿ ಮತ್ತು ಹ್ಯಾಂಗಿಂಗ್‌ ಸೌರಬೇಲಿ ಸದ್ಯದ ಪರಿಹಾರವಾಗಿದ್ದು ಇದನ್ನು ಆನೆಗಳ ಹಾವಳಿ ಇರುವ ಪ್ರದೇಶದಲ್ಲಿ ಅಳವಡಿಸಲಾಗುವುದು. 

ಮನು​ಷ್ಯನ ಜೀವ​ಕ್ಕೆ ಪರಿ​ಹಾರ ನೀಡಿ ಬೆಲೆ ಕಟ್ಟಲು ಆಗು​ವು​ದಿಲ್ಲ. ವನ್ಯ​ಜೀ​ವಿ​ಗ​ಳಿಂದ ಮಾನವ ಹತ್ಯೆ ಸಂಭ​ವಿ​ಸ​ಬಾ​ರ​ದೆಂದು ಶಾಶ್ವ​ತ​ವಾ​ದ​ ಯೋ​ಜ​ನೆ​ಗ​ಳನ್ನು ರೂಪಿಸಿ ಕ್ರಮ ತೆಗೆ​ದು​ಕೊ​ಳ್ಳಲು ಅಧಿ​ಕಾ​ರಿ​ಗ​ಳೊಂದಿಗೆ ಚರ್ಚೆ ಮಾಡ​ಲಾ​ಗು​ತ್ತಿದೆ ಎಂದು ಈಶ್ವರ್‌ ಖಂಡ್ರೆ ತಿಳಿ​ಸಿ​ದ​ರು. 1980ರಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬರುವ ಪೂರ್ವ​ದಲ್ಲಿ ಬುಡ​ಕಟ್ಟು ಇತರೆ ಸಮು​ದಾಯ ಜನರು ಸಾಗು​ವಳಿ ಮಾಡು​ತ್ತಿ​ದ್ದರು. ಅವ​ರನ್ನು ಒಕ್ಕ​ಲೆ​ಬ್ಬಿ​ಸುವ ಕೆಲ​ಸ​ದಿಂದ​ ತೊಂದ​ರೆ​ಯಾ​ಗು​ತ್ತಿದೆ ಎಂಬ ಕೂಗು ರಾಜ್ಯಾ​ದ್ಯಂತ ಕೇಳಿ ಬರು​ತ್ತಿದೆ. ಈ ಬಗ್ಗೆ ವಿಧಾ​ನ​ಸಭಾ ಅಧಿ​ವೇ​ಶ​ನ​ದ​ಲ್ಲಿಯೂ ಚರ್ಚೆ​ಗಳು ನಡೆ​ದಿ​ವೆ. ಇದಕ್ಕೆ ಪರಿ​ಹಾರ ಕಲ್ಪಿ​ಸುವ ನಿಟ್ಟಿ​ನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆ​ದಿದೆ. 

ಅರಣ್ಯ ವೃದ್ಧಿ ಒಂದೆಡೆಯಾದರೆ, ಜನವಸತಿ ಪ್ರದೇಶ ಇರುವ ಜಾಗವನ್ನು ಜನರಿಗೆ ನೀಡಬೇಕಿದ್ದು ಇವೆರಡುಗಳ ಸಮನ್ವಯವನ್ನು ಮಾಡಿ ಜನರಿಗೆ ನ್ಯಾಯ ಒದಗಿಸಬೇಕಿದೆ. ಈಗಾ​ಗಲೇ ಸರ್ಕಾ​ರ​ದಿಂದ ಸುಪ್ರೀಂ ಕೋರ್ಟಿಗೆ ಶಿಫಾ​ರಸ್ಸು ಮಾಡ​ಲಾ​ಗಿದೆ. ಇದೀಗ 3 ಸಾವಿರ ಎಕರೆ ಪ್ರಸ್ತಾ​ವನೆ ಸಿದ್ದ​ವಾ​ಗು​ತ್ತಿದೆ ಎಂದು ಹೇಳಿ​ದ​ರು. ಬುಡ​ಕಟ್ಟು ಸಮು​ದಾಯ ಸೇರಿ ಇತರೆ ಜನ ವಸತಿ ಇರುವ ಪ್ರದೇ​ಶ​ಗಳು ಅರ​ಣ್ಯ ಪ್ರದೇ​ಶ​ವೆಂದು ಬರು​ತ್ತಿದೆ. ಅವ​ರಿ​ಗೆಲ್ಲ ಸರ್ಕಾ​ರದ ಸವ​ಲ​ತ್ತು​ಗ​ಳನ್ನು ಪಡೆ​ಯಲು ಆಗು​ತ್ತಿಲ್ಲ. ಜನಪರ ಕಳ​ಕಳಿ ಇಟ್ಟು​ಕೊಂಡು ಅವ​ರಿ​ಗೆಲ್ಲ ನ್ಯಾಯ ಒದ​ಗಿ​ಸುವ ಕೆಲಸ ಮಾಡು​ತ್ತೇವೆ. ಜೊತೆಗೆ ಅರಣ್ಯ ಪ್ರದೇಶ ಒತ್ತು​ವರಿ ಆಗ​ದಂತೆಯೂ ಎಚ್ಚರ ವಹಿ​ಸು​ತ್ತೇವೆ. ವನ್ಯ​ಜೀ​ವಿ​ಗಳಿಂದ ಸಂಭ​ವಿ​ಸು​ತ್ತಿ​ರುವ ಪ್ರಾಣ ಹಾನಿ ಹಾಗೂ ಬೆಳೆ ಹಾನಿಗೆ ನೀಡು​ತ್ತಿದ್ದ ಪರಿ​ಹಾ​ರ​ವನ್ನು ದುಪ್ಪಟ್ಟು ಮಾಡ​ಲಾ​ಗಿದೆ. 

ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್‌.ಡಿ.ಕುಮಾರಸ್ವಾಮಿ

ಬೆಳೆ ಹಾನಿಗೆ ವೈಜ್ಞಾ​ನಿಕ ಪರಿ​ಹಾರ ಕಲ್ಪಿ​ಸುವ ನಿಟ್ಟಿ​ನಲ್ಲಿ ಸರ್ಕಾ​ರಕ್ಕೆ ಪ್ರಸ್ತಾ​ವನೆ ಸಲ್ಲಿಸಿ ಪ್ರಯತ್ನ ಮಾಡು​ತ್ತೇ​ನೆ. ರಾಮ​ದೇ​ವರ ಬೆಟ್ಟ​ದಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪರಿ​ಸರ ವಾದಿ​ಗಳ ಜೊತೆಗೆ ಚರ್ಚಿಸಿ ಒಮ್ಮ​ತದ ತೀರ್ಮಾನ ತೆಗೆ​ದು​ಕೊ​ಳ್ಳು​ತ್ತೇವೆ ಎಂದು ಸಚಿವ ಈಶ್ವರ್‌ ಖಂಡ್ರೆ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು. ಸುದ್ದಿ​ಗೋ​ಷ್ಠಿ​ಯಲ್ಲಿ ಸಂಸ​ದ ಡಿ.ಕೆ.​ಸು​ರೇಶ್‌, ಶಾಸಕ ಇಕ್ಬಾಲ್‌ ಹುಸೇನ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರ​ವಿ, ಅರಣ್ಯ ಇಲಾಖೆಯ ಡಿಸಿಸಿಎಫ್‌ ರಾಜು ರಾಜೇಂದ್ರನ್‌, ಎಸಿಸಿಎಫ್‌ ಪುಷ್ಕರ್‌, ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌, ತಹಸೀಲ್ದಾರ್‌ ತೇಜಸ್ವಿನಿ, ಡಿಸಿಎಫ್‌ ದೇವರಾಜು ಇತರರಿದ್ದರು.

Follow Us:
Download App:
  • android
  • ios