Asianet Suvarna News Asianet Suvarna News

ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿ ಚಿನ್ನಾಭರಣ ಸಮೇತ ಅರೆಸ್ಟ್

  • ಮನೆಯ ಬೀಗ ಒಡೆದು  ಕಳವು ಮಾಡಿದ್ದ ಆರೋಪಿಯನ್ನು ಬಂಧನ
  • ಚಿನ್ನಾಭರಣ ಸಮೇತ ಆರೋಪಿ ಬಂಧಿಸಿದ ಪೊಲೀಸರು
  • ಸೊರಬ ತಾಲೂಕಿನ ಛತ್ರದಹಳ್ಳಿ ಗ್ರಾಮದಲ್ಲಿ ಘಟನೆ
thief Arrested with Gold ornament in shivamogga snr
Author
Bengaluru, First Published Jul 4, 2021, 10:06 AM IST

ಶಿವಮೊಗ್ಗ (ಜು.04): ಮನೆಯ ಬೀಗ ಒಡೆದು  ಕಳವು ಮಾಡಿದ್ದ ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. 

ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲು  ಮನೆಯ ಬೀಗ ಒಡೆದು ಕಳವು ಮಾಡಿದ್ದ ಸೊರಬ ತಾಲೂಕಿನ ಛತ್ರದಹಳ್ಳಿ ಗ್ರಾಮದ ಚಂದ್ರಪ್ಪ ಗಣೇಶಪ್ಪ ( 30 ) ಎಂಬ ಆರೋಪಿಯನ್ನು ಇಂದು ಸೊರಬ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ತೈಲ ಬೆಲೆ ದುಬಾರಿ ಆಗ್ತಿದ್ದಂತೆ ಬಂಕ್‌ಗೇ ಕನ್ನ: 4.50 ಲಕ್ಷದ ಪೆಟ್ರೋಲ್‌ ಕಳವು..! .

ಜೂನ್ 29 ರಂದು ಗ್ರಾಮದ ರಮೇಶ್ ಕುಟುಂಬ ಸಮೇತ ಆರಿದ್ರಾ ಮಳೆ ಹಬ್ಬಕ್ಕೆಂದು ನೆರೆಯ ಗ್ರಾಮಕ್ಕೆ ತೆರಳಿದ್ದರು.

 ಈ ಬಗ್ಗೆ ಮಾಹಿತಿ ಹೊಂದಿದ್ದ ಚಂದ್ರಪ್ಪ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು , ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ.

 ಕಳ್ಳತನವಾಗಿರುವ ಕುರಿತು ಮನೆ ಮಾಲೀಕ ರಮೇಶ್ ಸೊರಬ ಪೊಲೀಸರಿಗೆ ದೂರು ಸಲ್ಲಿಸಿದ್ದ.  ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಚಂದ್ರಪ್ಪ ಒಮ್ಮೆಗೆ ಸ್ವಸಹಾಯ ಸಂಘದ ಸಾಲ 60 ಸಾವಿರ ರು. ತೀರಿಸಿರುವುದು ಬೆಳಕಿಗೆ ಬಂದಿತ್ತು . 

ಕೆಲಸ ಮಾಡದೆ ಅಡ್ಡಾಡಿಕೊಂಡಿದ್ದ ಈತ ಹೇಗೆ ಸಾಲ ತೀರಿಸಿದ ಎಂಬ ಬಗ್ಗೆ ವಿಚಾರಣೆ ನಡೆಸಿದ್ದು ಈ ವೇಳೆ  ಕಳ್ಳತನ ಮಾಡಿರುವುದು ಗೊತ್ತಾಗಿದೆ.  

ಬಳಿಕ  ಆರೋಪಿಯಿಂದ 10 ಗ್ರಾಂ ತೂಕದ ಚೈನ್ , 8 ಗ್ರಾಂ ಎರಡು ಕೆನ್ನೆ ಸರಪಳಿ , 6 ಗ್ರಾಂ ತೂಕದ ಉಂಗುರ ಹಾಗೂ 2 ಗ್ರಾಂ ತೂಕದ ಒಂದು ಬಟನ್ ಸೇರಿ  ಚಿನ್ನಾಭರಣಗಳು ಪತ್ತೆಯಾಗಿವೆ.  ಅಂದಾಜು 92 ಸಾವಿರ ರೂ . ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 

Follow Us:
Download App:
  • android
  • ios