Asianet Suvarna News Asianet Suvarna News

ಹಿಂದೂಗಳೆಲ್ಲ ಒಂದಾಗುವ ಕಾಲ ಬಂದಿದೆ: ಚೈತ್ರಾ ಕುಂದಾಪುರ

ನಾವು ಯಾವುದೇ ಪಕ್ಷದವರಿರಲಿ, ಯಾವುದೇ ಜಾತಿಯವರಿರಲಿ ನಾವು ಹಿಂದುಗಳು ಎಂದಾಗ ಒಂದಾಗಬೇಕು ಎಂದು ವಾಗ್ಮಿ ಚೈತ್ರ ಕುಂದಾಪುರ ಹೇಳಿದರು.

The time has come for all Hindus to unite says Chaitra Kundapur rav
Author
First Published Mar 24, 2023, 9:56 AM IST

ಸಿದ್ದಾಪುರ (ಮಾ.24) : ನಾವು ಯಾವುದೇ ಪಕ್ಷದವರಿರಲಿ, ಯಾವುದೇ ಜಾತಿಯವರಿರಲಿ ನಾವು ಹಿಂದುಗಳು ಎಂದಾಗ ಒಂದಾಗಬೇಕು ಎಂದು ವಾಗ್ಮಿ ಚೈತ್ರ ಕುಂದಾಪುರ ಹೇಳಿದರು.

ಅವರು ಸಿದ್ದಾಪುರ ನೆಹರು ಮೈದಾನದಲ್ಲಿ ನಡೆದ ಯುಗಾದಿ ಉತ್ಸವದ ಮುಖ್ಯ ವಕ್ತಾರೆಯಾಗಿ ಪಾಲ್ಗೊಂಡು ಮಾತನಾಡಿದರು.

ಜಗತ್ತಿನ ಅಳಿವು ಉಳಿವು ಹೆಣ್ಣಿನ ಮೇಲೆ ನಿಂತಿದೆ : ಚೈತ್ರಾ ಕುಂದಾಪುರ

ತುಳಸಿ ಹಾಗೂ ಗೋವನ್ನು ದೇವತೆಗಳ ಆವಾಸಸ್ಥಾನ ಎಂದು ಆರಾಧನೆ ಮಾಡುವಂತಹ ಪರಂಪರೆ ನಮ್ಮ ಹಿಂದುಗಳದ್ದು. ಕೆಲವು ಸಂಘಟನೆಗಳು ಕೇವಲ ಹಿಂದುಗಳ ಹಬ್ಬದ ಕುರಿತು ಮಾತ್ರ ಮಾತನಾಡುತ್ತವೆ. ಇವರು ನಮ್ಮ ಹಿಂದುಗಳ ಹಬ್ಬವನ್ನು ಬಿಟ್ಟು ಬೇರೆ ಹಬ್ಬ ಬಂದರೆ ಅವರಿಗೆ ಪಾಠ ಮಾಡೋಲ್ಲ. ಬಕ್ರಿದ್‌ ಹಬ್ಬದ ವೇಳೆಯಲ್ಲಿ ಸಾವಿರಾರು ಕುರಿ- ಮೇಕೆಗಳನ್ನು ಕಡಿದು ಹಾಕುತ್ತಾರೆ ಅವತ್ತು ಇವರಾರ‍ಯರು ಪಾಠ ಮಾಡುವುದಿಲ್ಲ

ನಮ್ಮ ಹಬ್ಬ ಬೆಳಕಿನ ಹಬ್ಬ ದೀಪಾವಳಿ(Diwali) ದಿನ, ಗೋ ಪೂಜೆ ಮಾಡುತ್ತೇವೆ ಎಂದರೆ ಆಗ ಪಾಠ ಮಾಡಲು ಬಹಳಷ್ಟುಜನ ಬುದ್ಧಿಜೀವಿಗಳು ಬರುತ್ತಾರೆ. ಧರ್ಮದ ಆಚರಣೆಗಳು ನಮ್ಮ ಬದ್ಧತೆ ಎಂದು ತಿಳಿಯಬೇಕಾದ ಸಮಯ ಈಗ ಬಂದಿದೆ. ನಮ್ಮ ಇತಿಹಾಸವಿರುವುದು ನಮ್ಮ ಪುರಾತನ ಗ್ರಂಥಗಳಾದ ರಾಮಾಯಣ, ಮಹಾಭಾರತದಲ್ಲಿ. ಯುಗಾದಿ ನಮ್ಮ ಹೊಸ ವರ್ಷ, ಶ್ರೀರಾಮಚಂದ್ರ ಪಟ್ಟಾಭಿಷಕ್ತನಾದ ದಿನದಂದು ಪ್ರಾರಂಭವಾಗುತ್ತದೆ. ಕುಡಿದು, ಎಣ್ಣೆ ಪಾರ್ಟಿ ಮಾಡಿಕೊಂಡು ಕುಣಿಯುವ ಹೊಸವರ್ಷ ನಮ್ಮದಲ್ಲ ಎಂದರು.

ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಹಿಂದುಗಳ ಹಬ್ಬದ ವೈಶಿಷ್ಟ್ಯವಾಗಿದೆ. ಭೂಮಿಯ ಪ್ರತಿಯೊಂದೂ ಜೀವಿಗೂ ಬದುಕಲು ಹಕ್ಕಿದೆ ಎಂದು ಸಾರಲು ನಾವು ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತೇವೆ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಭಾವನೆ ಸಮಸ್ತ ಹಿಂದುಗಳಲ್ಲಿ ಬರಬೇಕಾಗಿದೆ ಎಂದರು.

ಸಿದ್ದಾಪುರದಂತಹ ಊರಿನಲ್ಲಿ ಶೇ. ನೂರರಷ್ಟುಹಿಂದುಗಳು ಅಡಿಕೆ ಬೆಳೆಯುತ್ತಾರೆ. ಆದರೆ, ವ್ಯಾಪಾರದ ಮೂಲಕ ಕೋಟ್ಯಾಂತರ ಲಾಭಗಳಿಸಿಕೊಳ್ಳುತ್ತಿರುವರು ಅನ್ಯ ಧರ್ಮದವರು. ನಮ್ಮ ಎಲ್ಲ ವ್ಯಾಪಾರ ವ್ಯವಹಾರಗಳು ಹಿಂದುಗಳೊಂದಿಗೆ ನಡೆಯಬೇಕು ಇಲ್ಲವಾದಲ್ಲಿ ನಮ್ಮ ಗೋಮಾತೆಯ ಕುತ್ತಿಗೆಗೆ ಅವರ ಕತ್ತಿ ಬೀಳುತ್ತದೆ ನಮ್ಮ ಹೆಣ್ಣುಮಕ್ಕಳು ಅವರ ಪ್ರೀತಿ ಪ್ರಣಯದ ಹೆಸರಿನಲ್ಲಿ ಅನ್ಯ ಧರ್ಮದವರ ಪಾಲಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಆಚರಣೆಗಳು ಪರಂಪರೆಯಿಂದ ಬಂದ ಆಚರಣೆಗಳಾಗಿವೆ. ಇದನ್ನು ಉಳಿಸಲು ನಾವು ನಮ್ಮ ವ್ಯಾಪಾರ- ವಹಿವಾಟು ಹಿಂದುಗಳೊಂದಿಗೆ ಮಾಡಬೇಕಿದೆ. ನಮ್ಮ ಪರಂಪರೆಯ ಬಗ್ಗೆ ನಮ್ಮ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಲು ಕನಿಷ್ಠ ವಾರಕ್ಕೊಮ್ಮೆಯಾದರೂ ಸಹ ಕುಟುಂಬ ಸಮೇತವಾಗಿ ದೇವಾಲಯಗಳಿಗೆ ಹೋಗಬೇಕು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar hegde kageri)ಮಾತನಾಡಿ, ರಾಜಕೀಯ ಮರೆತು ನಾವೆಲ್ಲ ಹಿಂದೂಗಳು ಎಂಬ ಭಾವನೆಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಶ್ರಮದ ಫಲವಾಗಿ ಸಿದ್ದಾಪುರದಲ್ಲಿ ಯುಗಾದಿ ಉತ್ಸವದ ಕಾರ್ಯಕ್ರಮ ಹಾಗೂ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ. ವಿಶೇಷವಾಗಿ ಸಿದ್ದಾಪುರದ ಯುವ ಜನತೆ ತೋರಿದ ಉತ್ಸಾಹದಿಂದಾಗಿ ಯುಗಾದಿ ಉತ್ಸವ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಗಿದೆ. ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ಕಾರ್ಯಕ್ರಮ ನಡೆಸಿರುವುದು ಯಶಸ್ವಿಗೆ ಕಾರಣವಾಗಿದೆ ಎಂದರು.

ಲವ್ ಜಿಹಾದ್ ದೇಶಕ್ಕೆ ಅಂಟಿದ ಪಿಡುಗು: ಚೈತ್ರಾ ಕುಂದಾಪುರ

ಶಿಗ್ಗಾಂವಿಯ ಗದಿಗೇಶ್ವರ ಶ್ರೀಗಳು(Shiggavi gadigeshwar shree) ಪ್ರವಚನ ನೀಡಿದರು. ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ ನಾಯ್ಕ ಹೊಸೂರ, ಕಾರ್ಯಾಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ…, ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಡಾ. ಶಶಿಭೂಷಣ ಹೆಗಡೆ ಉಪಸ್ಥಿತರಿದ್ದರು. ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಧರ ವೈಧ್ಯ ಸ್ವಾಗತಿಸಿದರು. ಸುಧೀರ ಬೇಂದ್ರೆ ಪ್ರಾರ್ಥಿಸಿದರು. ಪ್ರೊ. ಎಂ.ಕೆ. ನಾಯ್ಕ ಹೊಸಳ್ಳಿ ನಿರೂಪಿಸಿದರು.

Follow Us:
Download App:
  • android
  • ios