Asianet Suvarna News Asianet Suvarna News

ತೇಜಸ್ ಯುದ್ಧ ವಿಮಾನ ಯಶೋಗಾಥೆ: ಪುಸ್ತಕ ಲೋಕಾರ್ಪಣೆ ಮಾಡಿದ ಸಚಿವ ಅಮಿತ್‌ ಶಾ

ಕೇಂದ್ರ‌ ಸರ್ಕಾರದ ಗೃಹ ಸಚಿವರಾದ ಅಮಿತ್‌ ಶಾ ಅವರು 'ಭಾರತದ ಆಗಸದಲ್ಲೊಂದು ರವಿತೇಜ-ತೇಜಸ್ ಯುದ್ಧ ವಿಮಾನ ಅಭಿವೃದ್ಧಿಯ ಯಶೋಗಾಥೆ' ಪುಸ್ತಕವನ್ನು ಅದಮ್ಯ ಚೇತನ ಸಂಸ್ಥೆಯು ಪ್ರಾಯೋಜಿಸಿದ  ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿ.31 ರಂದು ಬಿಡುಗಡೆ ಮಾಡಿದರು.

Tejas fighter jet success story: Minister Amit Shah launched the book sat
Author
First Published Jan 2, 2023, 12:03 PM IST

ಬೆಂಗಳೂರು (ಜ.02): ಕೇಂದ್ರ‌ ಸರ್ಕಾರದ ಗೃಹ ಸಚಿವರಾದ ಅಮಿತ್‌ ಶಾ ಅವರು 'ಭಾರತದ ಆಗಸದಲ್ಲೊಂದು ರವಿತೇಜ-ತೇಜಸ್ ಯುದ್ಧ ವಿಮಾನ ಅಭಿವೃದ್ಧಿಯ ಯಶೋಗಾಥೆ' ಪುಸ್ತಕವನ್ನು ಅದಮ್ಯ ಚೇತನ ಸಂಸ್ಥೆಯು ಪ್ರಾಯೋಜಿಸಿದ  ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿ.31 ರಂದು ಬಿಡುಗಡೆ ಮಾಡಿದರು. ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಕಂದಾಯ ಮಂತ್ರಿ ಅಶೋಕ, ಅದಮ್ಯ ಚೇತನ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್‌ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಪುಸ್ತಕವನ್ನು ನಾಡ್ಗೀರ್ (ಎಚ್‌ ಎ ಎಲ್‌ ನಲ್ಲಿ  ನಿರ್ದೇಶಕರಾ ನಿವೃತ್ತ), ಡಾ. ಎಂ. ವಿಜಯ ಕುಮಾರ್‌ ಮತ್ತು ಹೆಚ್‌ ಆರ್‌ ಪ್ರಕಾಶ್ ಅವರು ಸಂಪಾದನೆ ಮಾಡಿದ್ದಾರೆ. ಏರ್‌ ಮಾರ್ಶಲ್‌ ರಾಜಕುಮಾರ್‌ ಮತ್ತು  ಶ್ರೀಕಾಂತ್‌ ಬರೆದ ಈ ಪುಸ್ತಕವನ್ನು 'Radiance in Indian Skies – Tejas saga' 2019 ರಲ್ಲಿ ಡಿಆರ್ ಡಿಒ ದ ಅಂಗ ಸಂಸ್ಥೆಯಾದ ಡೆಸಿಡಾಕ್‌ ಪ್ರಕಟಿಸಿದೆ. ದೇಶೀಯವಾಗಿ ಲಘು ಯುದ್ಧ ವಿಮಾನವಾದ ಎಲ್‌ಸಿಎ ಅಥವಾ ತೇಜಸ್‌ ಅನ್ನು ಹೇಗೆ ಅಭಿವೃದ್ಧಿಪಡಿಸಲಾಯಿತು ಎಂಬುದನ್ನು ಈ ಪುಸ್ತಕ ವಿಶದವಾಗಿ ವಿವರಿಸುತ್ತದೆ. 

ಜೆಡಿಎಸ್ ಭದ್ರಕೋಟೆಯಿಂದ ಅಮಿತ್ ಶಾ ಆಟ ಶುರು: ಕಮಲ ಅರಳಿಸಲು ಚಾಣಕ್ಯನ ಸೂತ್ರವೇನು?

ಕನ್ನಡಕ್ಕೆ ಪುಸ್ತಕದ ಭಾಷಾಂತರ: ಈ ಪುಸ್ತಕ ಸಂಪೂರ್ಣವಾಗಿ ತಾಂತ್ರಿಕ ಪರಿಭಾಷೆಯಲ್ಲಿರುವುದರಿಂದ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಅನುಭವವಿದ್ದವರನ್ನು ಮಾತ್ರ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಯಿತು. ಈ ಅನುವಾದದಲ್ಲಿ ಡಾ. ಎಂ. ವಿಜಯ ಕುಮಾರ್‌ (ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು, ಎಚ್‌ಎಎಲ್‌, ಬೆಂಗಳೂರು),  ಶ್ರೀ ಹೆಚ್‌.ಆರ್‌. ಪ್ರಕಾಶ್‌ (ಭಾಷಾಂತರಕಾರರು, ಲೇಖಕರು ಹಾಗೂ ಸಂಪಾದಕರು, ನಿವೃತ್ತ ನಿರ್ವಾಹಕರು, ಬಿಇಎಂಎಲ್‌, ಬೆಂಗಳೂರು), ಶ್ರೀ ಅನಂತ ಅಗಸ್ತ್ಯ (ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು, ಎಚ್‌ಎಎಲ್‌, ಬೆಂಗಳೂರು), ಶ್ರೀ  ಕೆ.ಎಂ. ಭಟ್‌ (ನಿವೃತ್ತ ಪ್ರಧಾನ ವಿನ್ಯಾಸಕರು, ಎಚ್‌ಎಎಲ್‌, ಬೆಂಗಳೂರು), ಶ್ರೀ ಎಸ್. ಎ. ಗುರುಪ್ರಸಾದ್‌ (ನಿವೃತ್ತ ವಿಜ್ಞಾನಿ, ಎನ್‌ಎಎಲ್‌, ಬೆಂಗಳೂರು),  ಶ್ರೀ ಎಚ್. ವಿ. ರಾಮಚಂದ್ರ (ನಿವೃತ್ತ ವಿಜ್ಞಾನಿ, ಎನ್‌ಎಎಲ್‌, ಬೆಂಗಳೂರು) ಮತ್ತು ಶ್ರೀಮತಿ ಎಸ್‌. ಕ್ಷಮಾ (ವಿಜ್ಞಾನಿ, ಎನ್‌ಎಎಲ್‌, ಬೆಂಗಳೂರು). ಕನ್ನಡ ಪುಸ್ತಕ ಅನುವಾದದ ಯೋಜನೆಯ ಸಂಚಾಲಕರು ಅದಮ್ಯ ಚೇತನ ಸಂಸ್ಥೆಯ ಬೋರ್ಡ್‌ ಸದಸ್ಯರಾದ ಡಿ ಆರ್‌ ಸುಬ್ರಮಣ್ಯಂ ( ಬೆಂಗಳೂರಿನ ಎಸ್‌ ಎಲ್  ಎನ್‌  ಟೆಕ್ನಾಲಜಿಯ  ನಿರ್ದೇಶಕರು) ಭಾಗವಹಿಸಿದ್ದರು.

ಕನ್ನಡದಲ್ಲಿ ತೇಜಸ್‌ ಯುದ್ಧ ವಿಮಾನದ ಮಾಹಿತಿ: ತೇಜಸ್‌ ಯುದ್ಧ ವಿಮಾನದ ಕುರಿತ ಸಾಧನೆಯ ಈ ಪುಸ್ತಕದಲ್ಲಿ 225 ಪುಟಗಳು, 28 ಅಧ್ಯಾಯಗಳು, 150 ಕ್ಕೂ ಹೆಚ್ಚು ಚಿತ್ರಗಳು ಇವೆ. ಇದು ದೊಡ್ಡ ಗಾತ್ರದ ಕಸ್ಟಮ್‌ ಸೈಜ್‌ ಪುಸ್ತಕವಾಗಿದೆ. ವಿಮಾನ ವಿನ್ಯಾಸದ ಹಲವು ಮಜಲುಗಳಾದ ವಿಮಾನದ ಆರಂಭಿಕ ವಿನ್ಯಾಸ, ವಿಮಾನದ ಸಂರಚನೆಗಳ ವಿಶದವಾದ ವಿನ್ಯಾಸ, ಮಾದರಿ ವಿಮಾನದ ತಯಾರಿಕೆ, ವಿವಿಧ ವ್ಯವಸ್ಥೆಗಳ ಅನುಸ್ಥಾಪನೆ, ಫ್ಲೈ-ಬೈ- ವೈರ್‌ ತಂತ್ರಜ್ಞಾನದ  ಹಾರಾಟ ನಿಯಂತ್ರಣ ವ್ಯವಸ್ಥೆಯ ವಿನ್ಯಾಸ, ಆಕಾಶದಲ್ಲಿ ವಿಮಾನದಿಂದ ವಿಮಾನಕ್ಕೆ ಇಂಧನ ತುಂಬಿಸುವ ತಂತ್ರಜ್ಞಾನ, ಏವಿಯಾನಿಕ್ಸ್‌ ವಾಸ್ತು ವಿನ್ಯಾಸ, ಶಸ್ತ್ರಾಸ್ತ್ರಗಳ ಸಂಯೋಜನೆ, ಹಾರಾಟ ಪರೀಕ್ಷೆ, ಸರಣಿ ತಯಾರಿಕೆ, ಮೊದಲ ತೇಜಸ್‌  ತುಕಡಿ ರಚನೆ ಇನ್ನೂ ಮುಂತಾದ ವಿಷಯಗಳ ಕುರಿತು ಇರುವ ಸುದೀರ್ಘ ಅಧ್ಯಾಯಗಳನ್ನು ಕನ್ನಡಕ್ಕೆ ತರಲಾಗಿದೆ. 

Assembly election 2023: ರಾಜ್ಯದಲ್ಲಿ ಜಾತಿ ಸಮೀಕರಣಕ್ಕೆ ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌!

ಬೆಂಗಳೂರಿನ ಚಾಮರಾಜಪೇಟೆಯ ಫ್ರೆಂಡ್ಸ್‌ ಕಾಮ್‌ ಟೆಕ್ ನ ಸುರೇಶ್‌ ಅವರು ಡಿಟಿಪಿ ಮಾಡಿ, ಅಂದವಾಗಿ ಮುದ್ರಿಸಿದ್ದಾರೆ.   ಈ ಪುಸ್ತಕ ಸಂಪೂರ್ಣವಾಗಿ ತಾಂತ್ರಿಕ ಪರಿಭಾಷೆಯಲ್ಲಿರುವುದರಿಂದ, ಇದರ ಅನುವಾದ ಮಾಡುವುದು ಸವಾಲಿನ ಕೆಲಸವಾಗಿತ್ತು.  ಕೊನೆಯಲ್ಲಿ ಪಾರಿಭಾಷಿಕ ಶಬ್ದಗಳ ಪಟ್ಟಿ ಕೊಡಲಾಗಿದೆ.

Follow Us:
Download App:
  • android
  • ios