Asianet Suvarna News Asianet Suvarna News

'ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಉಗ್ರ ಕೃತ್ಯ ಇಳಿಕೆ'

ಮುಸ್ಲಿಂ ರಾಷ್ಟ್ರ ಗಳಾದ ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಆಝಾನ್‌ ಕೂಗುವುದನ್ನು ನಿಷೇಧಿ​ಸಲಾಗಿದೆ. ಆಝಾನ್‌ ವಿಚಾರವನ್ನು ನಮ್ಮಲ್ಲಿ ರಾಜಕೀಯ ವಿಚಾರವಾಗಿಸಲಾಗುತ್ತಿದೆ: ಸುಧಾಂಶು ತ್ರಿವೇದಿ  

Sudhanshu Trivedi talks Over PM Narendra Modi grg
Author
First Published Mar 25, 2023, 1:30 AM IST

ಮಂಗಳೂರು(ಮಾ.25):  ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ಆಗಿದ್ದು, ಉಗ್ರ ಚಟುವಟಿಕೆ ಗಣನೀಯವಾಗಿ ಇಳಿಮುಖಗೊಂಡಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನ, ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಬಿಜೆಪಿ ಮಾತ್ರ ಭರವಸೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು. 

ಮಂಗಳೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಕಂಟಕವಾಗಿದ್ದ ಪಿಎಫ್‌ಐ ಸಂಘಟನೆಯನ್ನು ಬಿಜೆಪಿ ಸರ್ಕಾರ ನಿಷೇಧಿಸಿದೆ. ಆದರೆ, ಕರ್ನಾಟಕದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದಿತ್ತು. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ​ದ ಆರೋಪಿ ಬಗ್ಗೆ ಕಾಂಗ್ರೆಸ್‌ ಮೃದು ಧೋರಣೆ ತಳೆದಿದ್ದು, ಆತನನ್ನು ಅಮಾಯಕ ಎಂದು ಬಿಂಬಿಸಿದೆ. ಕಾಂಗ್ರೆಸ್‌ ಮುಖಂಡರೊಬ್ಬರು ಆರೋಪಿಯನ್ನು ‘ಬ್ರದರ್‌’ ಎಂದು ಸಂಬೋಧಿಸಿದ್ದಾರೆ. ಯಾಕೂಬ್‌ ಮೆಮನ್‌, ಅಫ್ಜಲ್‌ ಗುರು, ಝಾಕೀರ್‌ ನಾಯ್ಕ್‌ ಸಹಿತ ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್‌ ಅನುಕಂಪ ಹೊಂದಿದೆ ಎಂದು ಆರೋಪಿಸಿದರು.

CHARUKEERTHI BHATTARAKA SWAMIJI: ಬೆಳಗೊಳದ ಭಟ್ಟಾರಕ ಶ್ರೀಗಳವರ ನೆನಪಲ್ಲಿ ಜೈನಕಾಶಿ ಮೂಡುಬಿದಿರೆ

ಲವ್‌ ಜಿಹಾದ್‌ ಎಂಬ ಪದವನ್ನು ಆರ್‌ಎಸ್‌ಎಸ್‌, ಬಿಜೆಪಿ ಸೃಷ್ಟಿಸಿಲ್ಲ. ಕೇರಳ ಪೊಲೀಸರ ಮಾಹಿತಿ ಆಧರಿಸಿ ಅಲ್ಲಿನ ಮುಖ್ಯಮಂತ್ರಿ ವಿ.ಎಸ್‌.ಅಚ್ಯುತಾನಂದನ್‌ ಅವರೇ ಹೇಳಿದ್ದರು. ಆಝಾನ್‌ ಬಗ್ಗೆ ಈಗಾಗಲೇ ಸುಪ್ರೀಂಕೋರ್ಚ್‌ ಅದೇಶ ನೀಡಿದೆ. ಮುಸ್ಲಿಂ ರಾಷ್ಟ್ರ ಗಳಾದ ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಆಝಾನ್‌ ಕೂಗುವುದನ್ನು ನಿಷೇಧಿ​ಸಲಾಗಿದೆ. ಆಝಾನ್‌ ವಿಚಾರವನ್ನು ನಮ್ಮಲ್ಲಿ ರಾಜಕೀಯ ವಿಚಾರವಾಗಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios